ಅಥ ಅಷ್ಟಾದಶೋಽಧ್ಯಾಯಃ ಅಧ್ಯಾಯ ೧೮

ಅರ್ಜುನ ಉವಾಚ
1 ಸಂನ್ಯಾಸಸ್ಯ ಮಹಾಬಾಹೋ ತತ್ವಮಿಚ್ಛಾಮಿ ವೇದಿತುಮ್ । ತ್ಯಾಗಸ್ಯ ಚ ಹೃಷೀಕೇಶ ಪೃಥಕ್ ಕೇಶಿ-ನಿಷೂದನ ॥
ಅರ್ಜುನ ಹೇಳಿದನು - ಓ ಮಹಾಬಾಹುವೆ, ಹೃಷೀಕೇಶನೆ, ಕೇಶಿದೈತ್ಯನನ್ನು ಕೊಂದವನೆ, ಸಂನ್ಯಾಸದ ಮತ್ತು ತ್ಯಾಗದ ಸ್ವರೂಪವನ್ನು ಮತ್ತು ವ್ಯತ್ಯಾಸವನ್ನು ತಿಳಿಯಲು ಬಯಸುತ್ತೇನೆ.
ಭಗವಾನ್ ಉವಾಚ
2 ಕಾಮ್ಯಾನಾಂ ಕರ್ಮಣಾಂ ನ್ಯಾಸಂ ಸಂನ್ಯಾಸಂ ಕವಯೋ ವಿದುಃ । ಸರ್ವ-ಕರ್ಮ-ಫಲ-ತ್ಯಾಗಂ ಪ್ರಾಹುಸ್ತ್ಯಾಗಂ ವಿಚಕ್ಷಣಾಃ ॥
ಕೃಷ್ಣನು ಹೇಳಿದನು - ಕಾಮ್ಯ (ನಿತ್ಯ-ನೈಮಿತ್ತಿಕವಲ್ಲದ) ಕರ್ಮಗಳನ್ನು ಬಿಡುವುದನ್ನು ಜ್ಞಾನಿಗಳು ಸಂನ್ಯಾಸ ಎನ್ನುತ್ತಾರೆ. ಎಲ್ಲ ಕರ್ಮಗಳ ಫಲವನ್ನಷ್ಟೇ ಬಿಡುವುದನ್ನು ಪಂಡಿತರು ತ್ಯಾಗ ಎನ್ನುವರು.
3 ತ್ಯಾಜ್ಯಂ ದೋಷ-ವದಿತ್ಯೇಕೇ ಕರ್ಮ ಪ್ರಾಹುರ್ಮನೀಷಿಣಃ । ಯಜ್ಞ-ದಾನ-ತಪಃ-ಕರ್ಮ ನ ತ್ಯಾಜ್ಯಮಿತಿ ಚಾಪರೇ ॥
ದೋಷವುಳ್ಳ ಕರ್ಮವನ್ನು ಬಿಡಬೇಕು ಎಂದು ಕೆಲವು ವಿದ್ವಾಂಸರು ಹೇಳುತ್ತಾರೆ. ಮತ್ತೆ ಕೆಲವರು ಯಜ್ಞ-ದಾನ-ತಪಸ್ಸುಗಳನ್ನು ಬಿಡಬಾರದು ಎನ್ನುತ್ತಾರೆ.
4 ನಿಶ್ಶ್ಚಯಂ ಶೃಣು ಮೇ ತತ್ರ ತ್ಯಾಗೇ ಭರತ-ಸತ್ತಮ । ತ್ಯಾಗೋ ಹಿ ಪುರುಷ-ವ್ಯಾಘ್ರ ತ್ರಿ-ವಿಧಃ ಸಂಪ್ರ-ಕೀರ್ತಿತಃ ॥
ಓ ಭರತಶ್ರೇಷ್ಠನೆ, ಇಲ್ಲಿ ತ್ಯಾಗದ ವಿಷಯದಲ್ಲಿ ನನ್ನ ನಿರ್ಣಯ ಕೇಳು. ಓ ಪುರುಷಶ್ರೇಷ್ಠನೆ, ತ್ಯಾಗವು ಮೂರು ಬಗೆ ಎಂದು ಹೇಳಲ್ಪಟ್ಟಿದೆ.
5 ಯಜ್ಞ-ದಾನ-ತಪಃ-ಕರ್ಮ ನ ತ್ಯಾಜ್ಯಂ ಕಾರ್ಯಮೇವ ತತ್ । ಯಜ್ಞೋ ದಾನಂ ತಪಶ್ಚೈವ ಪಾವನಾನಿ ಮನೀಷಿಣಾಮ್ ॥
ಯಜ್ಞ-ದಾನ-ತಪಸ್ಸುಗಳನ್ನು ಬಿಡಬಾರದು. ಆ ಕರ್ಮಗಳನ್ನು ಮಾಡಲೇಬೇಕು. ಯಜ್ಞ, ದಾನ ಮತ್ತು ತಪಸ್ಸು, ಜ್ಞಾನಿಗಳನ್ನೂ ಶುದ್ಧಗೊಳಿಸುವ ಕರ್ಮಗಳು.
6 ಏತಾನ್ಯಪಿ ತು ಕರ್ಮಾಣಿ ಸಂಗಂ ತ್ಯಕ್ತ್ವಾ ಫಲಾನಿ ಚ । ಕರ್ತವ್ಯಾನೀತಿ ಮೇ ಪಾರ್ಥ ನಿಶ್ಚಿತಂ ಮತಮುತ್ತಮಮ್ ॥
ಓ ಪಾರ್ಥನೆ, ಈ ಕರ್ಮಗಳನ್ನು ನಾನು ಮಾಡುವೆನೆಂಬ ಅಭಿಮಾನ ಬಿಟ್ಟು ಮತ್ತು ಫಲದ ಆಸೆಯನ್ನೂ ತೊರೆದು ಮಾಡಬೇಕು ಎಂದು ನನ್ನ ದೃಢವಾದ ಅಭಿಪ್ರಾಯ, ಶ್ರೇಷ್ಠವೂ ಆಗಿದೆ.
7 ನಿಯತಸ್ಯ ತು ಸಂನ್ಯಾಸಃ ಕರ್ಮಣೋ ನೋಪ-ಪದ್ಯತೇ । ಮೋಹಾತ್ ತಸ್ಯ ಪರಿತ್ಯಾಗಃ ತಾಮಸಃ ಪರಿ-ಕೀರ್ತಿತಃ ॥
ನಿಯತವಾದ (ತನಗೆ ಹೇಳಿದ) ಕರ್ಮವನ್ನು ಬಿಡುವುದು ಸರಿಯಲ್ಲ. ತಪ್ಪುತಿಳಿವಿನಿಂದ ಅದನ್ನು ತೊರೆಯುವುದು ತಾಮಸ ತ್ಯಾಗ ಎನಿಸುತ್ತದೆ.
8 ದುಃಖಮಿತ್ಯೇವ ಯತ್ ಕರ್ಮ ಕಾಯ-ಕ್ಲೇಶ-ಭಯಾತ್ ತ್ಯಜೇತ್ । ಸ ಕೃತ್ವಾ ರಾಜಸಂ ತ್ಯಾಗಂ ನೈವ ತ್ಯಾಗ-ಫಲಂ ಲಭೇತ್ ॥
ಕೆಲಸ ಕಷ್ಟ ನೀಡಲಿದೆ ಎಂದು ಬಗೆದು, ದೇಹದ ಬಾಧೆಗೆ ಬೆದರಿ ಮಾಡದೆ ಇರುವುದು ರಾಜಸ ತ್ಯಾಗ. ಇಂಥ ತ್ಯಾಗ ಮಾಡಿಯೂ ತ್ಯಾಗದ ಫಲ ಸಿಗದು.
9 ಕಾರ್ಯಮಿತ್ಯೇವ ಯತ್ ಕರ್ಮ ನಿಯತಂ ಕ್ರಿಯತೇಽರ್ಜುನ । ಸಂಗಂ ತ್ಯಕ್ತ್ವಾ ಫಲಂ ಚೈವ ಸ ತ್ಯಾಗಃ ಸಾತ್ತ್ವಿಕೋ ಮತಃ ॥
ಓ ಅರ್ಜುನನೆ, ಕರ್ತವ್ಯ ಎಂಬ ನಿಲುವಿನಿಂದ ನಿಯತ ಕರ್ಮವನ್ನು ಮಾಡುತ್ತ, ನಾನು ಮಾಡುವೆನು ಎಂಬ ಅಭಿಮಾನ ಮತ್ತು ಫಲದ ಆಸೆಯನ್ನು ಬಿಡುವುದು ಸಾತ್ತ್ವಿಕ ತ್ಯಾಗ.
10 ನ ದ್ವೇಷ್ಟ್ಯಕುಶಲಂ ಕರ್ಮ ಕುಶಲೇ ನಾನು-ಷಜ್ಜತೇ । ತ್ಯಾಗೀ ಸತ್ತ್ವ-ಸಮಾವಿಷ್ಟೋ ಮೇಧಾವೀ ಛಿನ್ನ-ಸಂಶಯಃ ॥
ತಿಳಿದವನು, ಸಂದೇಹ ಇಲ್ಲದವನು ಸಾತ್ತ್ವಿಕತ್ಯಾಗಿಯು ಸುಖ ನೀಡದ ಕರ್ಮವನ್ನು ವಿರೋಧಿಸನು, ಸುಖ ಕೊಡುವ ಕರ್ಮವನ್ನು ಅತಿಯಾಗಿ ಮೆಚ್ಚನು.
11 ನ ಹಿ ದೇಹ-ಭೃತಾ ಶಕ್ಯಂ ತ್ಯಕ್ತುಂ ಕರ್ಮಾಣ್ಯಶೇಷತಃ । ಯಸ್ತು ಕರ್ಮ-ಫಲ-ತ್ಯಾಗೀ ಸ ತ್ಯಾಗೀತ್ಯಭಿ-ಧೀಯತೇ ॥
ದೇಹ ಹೊತ್ತಿರುವ ಜೀವನಿಂದ ಕರ್ಮಗಳನ್ನು ಪೂರ್ತಿಯಾಗಿ ಬಿಡಲು ಆಗುವುದೆ ಇಲ್ಲ. ಕರ್ಮದ ಫಲವನ್ನು ಬಿಡುವವನೆ ಕರ್ಮತ್ಯಾಗಿ ಎನಿಸುತ್ತಾನೆ.
12 ಅನಿಷ್ಟಮಿಷ್ಟಂ ಮಿಶ್ರಂ ಚ ತ್ರಿ-ವಿಧಂ ಕರ್ಮಣಃ ಫಲಮ್ । ಭವತ್ಯತ್ಯಾಗಿನಾಂ ಪ್ರೇತ್ಯ ನ ತು ಸಂನ್ಯಾಸಿನಾಂ ಕ್ವಚಿತ್ ॥
ಕರ್ಮದ ಫಲ ಮೂರು ರೀತಿಯದ್ದು - ದುಃಖ, ಸುಖ ಮತ್ತು ಎರಡರ ಬೆರಕೆ. ಫಲ ತ್ಯಾಗ ಮಾಡದವರಿಗೆ ಇವು ಸತ್ತ ಮೇಲೆ ಸಿಗುತ್ತದೆ. ಫಲದ ಆಸೆ ಬಿಟ್ಟವರಿಗೆ ಇದು ಅಂಟಿಕೊಳ್ಳುವುದಿಲ್ಲ.
13 ಪಂಚೈತಾನಿ ಮಹಾ-ಬಾಹೋ ಕಾರಣಾನಿ ನಿಬೋಧ ಮೇ । ಸಾಂಖ್ಯೇ ಕೃತಾಂತೇ ಪ್ರೋಕ್ತಾನಿ ಸಿದ್ಧಯೇ ಸರ್ವ-ಕರ್ಮಣಾಮ್ ॥
ಓ ಮಹಾಬಾಹುವೆ, ಎಲ್ಲ ಕಾರ್ಯಗಳು ಆಗಲು ಇವು ಐದು ಕಾರಣಗಳು. ಸಾಂಖ್ಯ (ವೈದಿಕಜ್ಞಾನದ) ಶಾಸ್ತ್ರದಲ್ಲಿ ಚೆನ್ನಾಗಿ ಹೇಳಿದ ಅವುಗಳನ್ನು ನನ್ನಿಂದ ತಿಳಿದುಕೊಳ್ಳು.
14 ಅಧಿಷ್ಠಾನಂ ತಥಾ ಕರ್ತಾ ಕರಣಂ ಚ ಪೃಥಗ್ವಿಧಮ್ । ವಿವಿಧಾಶ್ಚ ಪೃಥಕ್ ಚೇಷ್ಟಾ ದೈವಂ ಚೈವಾತ್ರ ಪಂಚಮಮ್ ॥
ಕ್ರಿಯೆ ನಡೆಯುವ ಜಾಗ, ಮಾಡುವ ದೇವ (ಜೀವ), ಬೇರೆ ಬೇರೆ ಉಪಕರಣಗಳು, ನಾನಾ ರೀತಿಯ ಪ್ರಪ್ರತ್ಯೇಕ ಪೂರಕ ಕ್ರಿಯೆಗಳು ಮತ್ತು ಐದನೆಯದಾದ ಅದೃಷ್ಟ (ದೇವ).
15 ಶರೀರ-ವಾಙ್ಮನೋಭಿರ್ಯತ್ ಕರ್ಮ ಪ್ರಾರಭತೇ ನರಃ । ನ್ಯಾಯ್ಯಂ ವಾ ವಿಪರೀತಂ ವಾ ಪಂಚೈತೇ ತಸ್ಯ ಹೇತವಃ ॥
ಮನುಷ್ಯನು ದೇಹ-ಮಾತು-ಮನಸ್ಸುಗಳಿಂದ ಮಾಡುವ ಸರಿಯಾದ ಅಥವಾ ತಪ್ಪಾದ ಕೆಲಸಕ್ಕೆ ಇವು ಐದು ಕಾರಣಗಳು.
16 ತತ್ರೈವಂ ಸತಿ ಕರ್ತಾರಂ ಆತ್ಮಾನಂ ಕೇವಲಂ ತು ಯಃ । ಪಶ್ಯತ್ಯಕೃತ-ಬುದ್ಧಿತ್ವಾತ್ ನ ಸ ಪಶ್ಯತಿ ದುರ್ಮತಿಃ ॥
ಹೀಗಿರುವಾಗ, ತಾನೊಬ್ಬನೆ ಎಲ್ಲ ಮಾಡಿದವನು ಎಂದು ತಿಳಿದವನು ಕೆಟ್ಟ ಬುದ್ಧಿಯವನು. ಬುದ್ಧಿ ಕೆಟ್ಟವನಾದ್ದರಿಂದಲೆ ಆತ ಏನೂ ತಿಳಿದಿಲ್ಲ.
17 ಯಸ್ಯ ನಾಹಂ-ಕೃತೋ ಭಾವೋ ಬುದ್ಧಿರ್ಯಸ್ಯ ನ ಲಿಪ್ಯತೇ । ಹತ್ವಾಽಪಿ ಸ ಇಮಾನ್ ಲೋಕಾನ್ ನ ಹಂತಿ ನ ನಿಬಧ್ಯತೇ ॥
ನಾನು ಮಾಡಿದೆ ಎಂಬ ಸ್ವಾತಂತ್ರ್ಯದ ಅಭಿಮಾನ ಇಲ್ಲದವನು, ರಾಗದ್ವೇಷಗಳಿಲ್ಲದ ಶುದ್ಧ ಮನದವನು ಈ ಎಲ್ಲ ಜನರನ್ನು ಕೊಂದರೂ ಯಾರನ್ನೂ ಕೊಲ್ಲುವುದಿಲ್ಲ. ಕರ್ಮದ ಬಂಧನವೂ ಇಲ್ಲ.
18 ಜ್ಞಾನಂ ಜ್ಞೇಯಂ ಪರಿ-ಜ್ಞಾತಾ ತ್ರಿ-ವಿಧಾ ಕರ್ಮ-ಚೋದನಾ । ಕರಣಂ ಕರ್ಮ ಕರ್ತೇತಿ ತ್ರಿ-ವಿಧಃ ಕರ್ಮ-ಸಂಗ್ರಹಃ ॥
ಕರ್ಮವಿಧಿಯ ಉದ್ದೇಶ ಮೂರು - ಮಾಡಬೇಕೆಂಬ ಜ್ಞಾನ, ಅದಕ್ಕಾಗಿ ತಿಳಿಯಬೇಕಾದ ಕರ್ಮ- ಕರ್ಮಫಲ ಮತ್ತು ತಿಳಿದು ಮಾಡುವವನು. ಉಪಕರಣ, ಕ್ರಿಯೆ ಮತ್ತು ಮಾಡುವವನು ಎಂದು ಕರ್ಮದ ಕಾರಣವೂ ಸಂಕ್ಷೇಪವಾಗಿ ಮೂರು ರೀತಿಯು.
19 ಜ್ಞಾನಂ ಕರ್ಮ ಚ ಕರ್ತಾ ಚ ತ್ರಿ-ಧೈವ ಗುಣ-ಭೇದತಃ । ಪ್ರೋಚ್ಯತೇ ಗುಣ-ಸಂಖ್ಯಾನೇ ಯಥಾವಚ್ಛೃಣು ತಾನ್ಯಪಿ ॥
ಜ್ಞಾನ, ಕ್ರಿಯೆ ಮತ್ತು ಮಾಡುವವ - ಇವು ಮೂರು ಗುಣಗಳಿಂದಾಗಿ ಮೂರು ರೀತಿ ಎಂದು ಗುಣಗಳನ್ನು ಲೆಕ್ಕ ಮಾಡಿದ ಸಾಂಖ್ಯಶಾಸ್ತ್ರದಲ್ಲಿ ಹೇಳಲಾಗಿದೆ. ಅವುಗಳನ್ನು ಸರಿಯಾಗಿಯೆ ಕೇಳು.
20 ಸರ್ವ-ಭೂತೇಷು ಯೇನೈಕಂ ಭಾವಮವ್ಯಯಮೀಕ್ಷತೇ । ಅವಿಭಕ್ತಂ ವಿಭಕ್ತೇಷು ತಜ್‌ಜ್ಞಾನಂ ವಿದ್ಧಿ ಸಾತ್ತ್ವಿಕಮ್ ॥
ಪ್ರಪ್ರತ್ಯೇಕ ಭೇದವುಳ್ಳ ಎಲ್ಲ ಜೀವಿಗಳಲ್ಲಿ, ನಾಶವಿರದ ಭೇದವಿಲ್ಲದ ಒಬ್ಬನೇ ದೇವನನ್ನು ಕಾಣುವ ಜ್ಞಾನ ಸಾತ್ತ್ವಿಕ ಎಂದು ತಿಳಿ.
21 ಪೃಥಕ್ತ್ವೇನ ತು ಯಜ್‌ಜ್ಞಾನಂ ನಾನಾ-ಭಾವಾನ್ ಪೃಥಗ್ವಿಧಾನ್ । ವೇತ್ತಿ ಸರ್ವೇಷು ಭೂತೇಷು ತಜ್‌ಜ್ಞಾನಂ ವಿದ್ಧಿ ರಾಜಸಮ್ ॥
ಏಕದೇವನನ್ನು ತಿಳಿಯದೆ, ಎಲ್ಲ ಜೀವಿಗಳಲ್ಲಿ ಭೇದಮಾತ್ರದ ತಿಳಿವು ಅಂದರೆ ಪ್ರಪ್ರತ್ಯೇಕವಾದ ಬೇರೆ ಬೇರೆ ಧರ್ಮಗಳನ್ನು ತಿಳಿಯುವುದು ರಾಜಸ ಜ್ಞಾನ.
22 ಯತ್ ತು ಕೃತ್ಸ್ನ-ವದೇಕಸ್ಮಿನ್ ಕಾರ್ಯೇ ಸಕ್ತಮಹೈತುಕಮ್ । ಅತತ್ವಾರ್ಥ-ವದಲ್ಪಂ ಚ ತತ್ ತಾಮಸಮುದಾಹೃತಮ್ ॥
ಒಬ್ಬ ಜೀವನನ್ನೆ ಪೂರ್ಣನಾದ ದೇವನೆಂದು ತಿಳಿಯುವುದು, ಯುಕ್ತಿ ಇಲ್ಲದ ಜ್ಞಾನ, ತಪ್ಪುಕಲ್ಪನೆ ಉಳ್ಳದ್ದು, (ಹೆಚ್ಚು ಅಜ್ಞಾನವಿದ್ದು) ಸ್ವಲ್ಪ ಜ್ಞಾನವೂ ತಾಮಸ ಎಂದೆ ಹೇಳಲ್ಪಟ್ಟಿದೆ.
23 ನಿಯತಂ ಸಂಗ-ರಹಿತಂ ಅರಾಗ-ದ್ವೇಷತಃ ಕೃತಮ್ । ಅಫಲ-ಪ್ರೇಪ್ಸುನಾ ಕರ್ಮ ಯತ್ ತತ್ ಸಾತ್ತ್ವಿಕಮುಚ್ಯತೇ ॥
ತಾನು ಮಾಡಿದೆ ಎಂಬ ಅಭಿಮಾನವಿಲ್ಲದೆ, ಪ್ರೀತಿ-ಕೋಪಗಳಿಲ್ಲದೆ, ಫಲದ ಆಸೆ ಇಲ್ಲದೆ ಮಾಡಿದ ತನಗೆ ಹೇಳಿದ ಕರ್ಮ ಸಾತ್ತ್ವಿಕ ಎನಿಸುತ್ತದೆ.
24 ಯತ್ ತು ಕಾಮೇಪ್ಸುನಾ ಕರ್ಮ ಸಾಹಂ-ಕಾರೇಣ ವಾ ಪುನಃ । ಕ್ರಿಯತೇ ಬಹುಲಾಯಾಸಂ ತದ್ ರಾಜಸಮುದಾಹೃತಮ್ ॥
ಫಲದ ಆಸೆಯಿಂದ ಅಥವಾ ತಾನು ಮಾಡಿದೆ ಎಂಬ ಅಭಿಮಾನದಿಂದ ಬಹಳ ಕಷ್ಟಪಟ್ಟು ಮಾಡಿದ ಕರ್ಮ ರಾಜಸ ಎನಿಸುತ್ತದೆ.
25 ಅನುಬಂಧಂ ಕ್ಷಯಂ ಹಿಂಸಾಂ ಅನಪೇಕ್ಷ್ಯ ಚ ಪೌರುಷಮ್ । ಮೋಹಾದಾರಭ್ಯತೇ ಕರ್ಮ ಯತ್ ತತ್ ತಾಮಸಮುಚ್ಯತೇ ॥
ಫಲ, ನಷ್ಟ, ಪೀಡೆ ಮತ್ತು ಪ್ರಯತ್ನಗಳನ್ನು ಯೋಚಿಸದೆ ತಪ್ಪುತಿಳಿವಿನಿಂದ ಮಾಡಿದ ಕರ್ಮ ತಾಮಸ ಎನಿಸಿದೆ.
26 ಮುಕ್ತ-ಸಂಗೋಽನಹಂ-ವಾದೀ ಧೃತ್ಯುತ್ಸಾಹ-ಸಮನ್ವಿತಃ । ಸಿದ್ಧ್ಯಸಿದ್ಧ್ಯೋರ್ನಿರ್ವಿಕಾರಃ ಕರ್ತಾ ಸಾತ್ತ್ವಿಕ ಉಚ್ಯತೇ ॥
ಫಲದ ಆಸೆ ಬಿಟ್ಟವನು, ನಾನು ಮಾಡಿದೆ ಎಂದು ಹೇಳಿಕೊಳ್ಳದವನು, ಧೈರ್ಯ-ಉತ್ಸಾಹಗಳಿಂದ ತುಂಬಿದವನು, ಕೆಲಸ ಆದರೂ-ಆಗದಿದ್ದರೂ ವಿಕಾರವಿಲ್ಲದವನು ಸಾತ್ತ್ವಿಕ ಕರ್ತೃ ಎನಿಸಿದ್ದಾನೆ.
27 ರಾಗೀ ಕರ್ಮ-ಫಲ-ಪ್ರೇಪ್ಸುಃ ಲುಬ್ಧೋ ಹಿಂಸಾತ್ಮಕೋಽಶುಚಿಃ । ಹರ್ಷ-ಶೋಕಾನ್ವಿತಃ ಕರ್ತಾ ರಾಜಸಃ ಪರಿಕೀರ್ತಿತಃ ॥
ಕರ್ಮದ ಇಹ-ಪರ ಫಲಗಳನ್ನು ಬಯಸುವವ, ಜಿಪುಣ, ಹಿಂಸೆ ಪಡುವವ, ಮಡಿಯಿರದವ, ಫಲ ದೊರೆತಾಗ ಖುಷಿ ಪಡುವವ ಮತ್ತು ಸಿಗದಾಗ ದುಃಖಿಸುವವ ರಾಜಸ ಕರ್ತೃ ಎನಿಸಿದ್ದಾನೆ.
28 ಅಯುಕ್ತಃ ಪ್ರಾಕೃತಃ ಸ್ತಬ್ಧಃ ಶಠೋ ನೈಕೃತಿಕೋಽಲಸಃ । ವಿಷಾದೀ ದೀರ್ಘ-ಸೂತ್ರೀ ಚ ಕರ್ತಾ ತಾಮಸ ಉಚ್ಯತೇ ॥
ಆಚಾರ ಕೆಟ್ಟವ, ಸಂಸ್ಕಾರವಿಲ್ಲದವ, ದುರಹಂಕಾರಿ, ಉದ್ಧಟ, ಮೋಸಗಾರ, ಸೋಮಾರಿ, ಸಂಕಟಪಡುವವ, ಕೆಲಸವನ್ನು ಮುಂದೆ ದೂಡುವವ ತಾಮಸ ಕರ್ತೃ ಎನಿಸಿದ್ದಾನೆ.
29 ಬುದ್ಧೇರ್ಭೇದಂ ಧೃತೇಶ್ಚೈವ ಗುಣತಸ್ತ್ರಿ-ವಿಧಂ ಶೃಣು । ಪ್ರೋಚ್ಯಮಾನಮಶೇಷೇಣ ಪೃಥಕ್ತ್ವೇನ ಧನಂ-ಜಯ ॥
ಓ ಧನಂಜಯನೆ, ಮೂರು ಗುಣಗಳಿಂದ ಬುದ್ಧಿ ಮತ್ತು ಧೈರ್ಯವೂ ಮೂರು ರೀತಿ. ಇದರ ಪ್ರಪ್ರತ್ಯೇಕ ಪೂರ್ತಿ ವಿವರಣೆಯನ್ನು ಕೇಳು.
30 ಪ್ರವೃತ್ತಿಂ ಚ ನಿವೃತ್ತಿಂ ಚ ಕಾರ್ಯಾಕಾರ್ಯೇ ಭಯಾಭಯೇ । ಬಂಧಂ ಮೋಕ್ಷಂ ಚ ಯಾ ವೇತ್ತಿ ಬುದ್ಧಿಃ ಸಾ ಪಾರ್ಥ ಸಾತ್ತ್ವಿಕೀ ॥
ಓ ಪಾರ್ಥನೆ, ಇಹ ಮತ್ತು ಪರದ ಧರ್ಮಗಳನ್ನು, ಮಾಡಬೇಕಾದ ಮತ್ತು ಮಾಡಬಾರದ ಕರ್ಮಗಳನ್ನು, ಹೆದರಬೇಕಾದ ಮತ್ತು ಹೆದರಬಾರದ ವಿಷಯಗಳನ್ನು, ಬಂಧನದ ಮತ್ತು ಬಿಡುಗಡೆಯ ಮಾರ್ಗವನ್ನು ತಿಳಿಯಬಲ್ಲ ಬುದ್ಧಿಯು ಸಾತ್ವಿಕ.
31 ಯಯಾ ಧರ್ಮಮಧರ್ಮಂ ಚ ಕಾರ್ಯಂ ಚಾಕಾರ್ಯಮೇವ ಚ । ಅಯಥಾ-ವತ್ ಪ್ರಜಾನಾತಿ ಬುದ್ಧಿಃ ಸಾ ಪಾರ್ಥ ರಾಜಸೀ ॥
ಓ ಪಾರ್ಥನೆ, ಧರ್ಮ ಮತ್ತು ಅಧರ್ಮವನ್ನು, ಹಾಗೆಯೆ ಮಾಡಬೇಕಾದ ಮತ್ತು ಮಾಡಬಾರದ ಕರ್ಮಗಳನ್ನು ಸರಿಯಾಗಿ ನಿರ್ಣಯಿಸಲಾಗದ ಬುದ್ಧಿ ರಾಜಸವು.
32 ಅಧರ್ಮಂ ಧರ್ಮಮಿತಿ ಯಾ ಮನ್ಯತೇ ತಮಸಾಽಽವೃತಾ । ಸರ್ವಾರ್ಥಾನ್ ವಿಪರೀತಾಂಶ್ಚ ಬುದ್ಧಿಃ ಸಾ ಪಾರ್ಥ ತಾಮಸೀ ॥
ಓ ಪಾರ್ಥನೆ, ತಮೋಗುಣ ಆವರಿಸಿದಾಗ ಅಧರ್ಮವನ್ನೇ ಧರ್ಮವೆಂದು ತಿಳಿಯುವನು. ಹೀಗೆ ಎಲ್ಲ ಸಂಗತಿಗಳನ್ನೂ ವಿಪರೀತವಾಗಿಯೆ ತಿಳಿಯುವ ಬುದ್ಧಿ ತಾಮಸ.
33 ಧೃತ್ಯಾ ಯಯಾ ಧಾರಯತೇ ಮನಃ-ಪ್ರಾಣೇಂದ್ರಿಯ-ಕ್ರಿಯಾಃ । ಯೋಗೇನಾವ್ಯಭಿ-ಚಾರಿಣ್ಯಾ ಧೃತಿಃ ಸಾ ಪಾರ್ಥ ಸಾತ್ತ್ವಿಕೀ ॥
ಓ ಪಾರ್ಥನೆ, ಯೋಗದಿಂದಾಗಿ ತಪ್ಪೆಸಗದ ಧೈರ್ಯವು ಮನಸ್ಸಿನ, ಪ್ರಾಣಗಳ ಮತ್ತು ಇಂದ್ರಿಯಗಳ ಕೆಲಸಗಳನ್ನು ಸರಿಯಾಗಿ ಧರಿಸುತ್ತದೆ. ಇದು ಸಾತ್ತ್ವಿಕ ಧೈರ್ಯ.
34 ಯಯಾ ತು ಧರ್ಮ-ಕಾಮಾರ್ಥಾನ್ ಧೃತ್ಯಾ ಧಾರಯತೇಽರ್ಜುನ । ಪ್ರಸಂಗೇನ ಫಲಾಕಾಂಕ್ಷೀ ಧೃತಿಃ ಸಾ ಪಾರ್ಥ ರಾಜಸೀ ॥
ಪೃಥೆಯ ಮಗನಾದ ಓ ಅರ್ಜುನನೆ, ಧರ್ಮ-ಕಾಮ-ಅರ್ಥಗಳನ್ನು ಚೆನ್ನಾಗಿ ಗಮನಿಸುವ ಧೈರ್ಯ ಅತಿಯಾದ ಆಸಕ್ತಿಯಿಂದ ಫಲವನ್ನೂ ಬಯಸುವುದು. ಇದು ರಾಜಸ ಧೈರ್ಯ.
35 ಯಯಾ ಸ್ವಪ್ನಂ ಭಯಂ ಶೋಕಂ ವಿಷಾದಂ ಮದಮೇವ ಚ । ನ ವಿಮುಂಚತಿ ದುರ್ಮೇಧಾ ಧೃತಿಃ ಸಾ ಪಾರ್ಥ ತಾಮಸೀ ॥
ಓ ಪಾರ್ಥನೆ, ನಿದ್ದೆ, ಹೆದರಿಕೆ, ದುಃಖ, ಸಂಕಟ, ಸೊಕ್ಕುಗಳನ್ನು ಬಿಟ್ಟಿರದ ಕೆಟ್ಟಬುದ್ಧಿಯವನ ಧೈರ್ಯವು ತಾಮಸವು.
36 ಸುಖಂ ತ್ವಿದಾನೀಂ ತ್ರಿ-ವಿಧಂ ಶೃಣು ಮೇ ಭರತರ್ಷಭ । ಅಭ್ಯಾಸಾದ್ ರಮತೇ ಯತ್ರ ದುಃಖಾಂತಂ ಚ ನಿಗಚ್ಛತಿ ॥
37 ಯತ್ ತದಗ್ರೇ ವಿಷಮಿವ ಪರಿಣಾಮೇಽಮೃತೋಪಮಮ್ । ತತ್ ಸುಖಂ ಸಾತ್ವಿಕಂ ಪ್ರೋಕ್ತಂ ಆತ್ಮ-ಬುದ್ಧಿ-ಪ್ರಸಾದ-ಜಮ್ ॥
ಓ ಭರತಶ್ರೇಷ್ಠನೆ, ಮೂರು ಬಗೆಯ ಸುಖವನ್ನು ನನ್ನಿಂದ ಈಗ ಕೇಳು - ಮಾಡುತ್ತ ಮಾಡುತ್ತ ಖುಷಿಕೊಡುವ, ದುಃಖವನ್ನು ನಿಶ್ಚಯವಾಗಿ ತೆಗೆಯುವ ಸುಖವಿದು, ಮೊದಮೊದಲು ವಿಷದಂತೆ ಅಪ್ರಿಯವಾಗಿ ಕೊನೆಗೆ ಅಮೃತದಂತೆ ಪ್ರಿಯವಾಗಲಿದೆ. ತನ್ನ ಬುದ್ಧಿಯು ತಿಳಿಯಾದಾಗ ದೇವನ ಅನುಗ್ರಹದಿಂದ ಬರುವ ಸುಖ ಸಾತ್ತ್ವಿಕ.
38 ವಿಷಯೇಂದ್ರಿಯ-ಸಂಯೋಗಾತ್ ಯತ್ ತದಗ್ರೇಽಮೃತೋಪಮಮ್ । ಪರಿಣಾಮೇ ವಿಷಮಿವ ತತ್ ಸುಖಂ ರಾಜಸಂ ಸ್ಮೃತಮ್ ॥
ವಿಷಯಗಳ ಮತ್ತು ಇಂದ್ರಿಯಗಳ ಸಂಪರ್ಕದಿಂದ ಆದ ಸುಖವಿದು. ಆರಂಭದಲ್ಲಿ ಅಮೃತದಂತೆ ರುಚಿಕರ, ಫಲದಲ್ಲಿ ವಿಷದಂತೆ ವಿಕಾರಗೊಳಿಸುವ ಸುಖ ರಾಜಸವು.
39 ಯದಗ್ರೇ ಚಾನುಬಂಧೇ ಚ ಸುಖಂ ಮೋಹನಮಾತ್ಮನಃ । ನಿದ್ರಾಲಸ್ಯ-ಪ್ರಮಾದೋತ್ಥಂ ತತ್ ತಾಮಸಮುದಾಹೃತಮ್ ॥
ನಿದ್ದೆ, ಸೋಮಾರಿತನ, ಎಚ್ಚರಗೇಡಿತನಗಳಿಂದ ಸಿಗುವ ಸುಖ ಮೊದಲು ಮತ್ತೆ ಕೊನೆಗೂ ತನ್ನನ್ನೆ ಭ್ರಮೆಗೊಳಪಡಿಸುವುದು. ಇದು ತಾಮಸ ಸುಖ.
40 ನ ತದಸ್ತಿ ಪೃಥಿವ್ಯಾಂ ವಾ ದಿವಿ ದೇವೇಷು ವಾ ಪುನಃ । ಸತ್ವಂ ಪ್ರಕೃತಿ-ಜೈರ್ಮುಕ್ತಂ ಯದೇಭಿಃ ಸ್ಯಾತ್ ತ್ರಿಭಿರ್ಗುಣೈಃ ॥
ಭೂಮಿಯಲ್ಲಾಗಲಿ ಮತ್ತೆ ಸ್ವರ್ಗದ ದೇವತೆಗಳಲ್ಲಾಗಲಿ ಯಾವೊಬ್ಬ ಜೀವಿಯೂ ಪ್ರಕೃತಿಯಿಂದ ಉಂಟಾದ ಈ ಮೂರು ಗುಣಗಳಿಂದ ಬಿಡುಗಡೆ ಪಡೆದವನು ಇಲ್ಲ.
41 ಬ್ರಾಹ್ಮಣ-ಕ್ಷತ್ರಿಯ-ವಿಶಾಂ ಶೂದ್ರಾಣಾಂ ಚ ಪರಂ-ತಪ । ಕರ್ಮಾಣಿ ಪ್ರವಿ-ಭಕ್ತಾನಿ ಸ್ವ-ಭಾವ-ಪ್ರಭವೈರ್ಗುಣೈಃ ॥
ಓ ತಿಳಿದವನೆ, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರ ಕರ್ಮಗಳೂ (ಅವರವರ) ಸ್ವಭಾವದಿಂದ ಉಂಟಾದ ಗುಣಗಳಿಂದಾಗಿ ಬೇರೆ ಬೇರೆ ಆಗಿವೆ.
42 ಶಮೋ ದಮಸ್ತಪಃ ಶೌಚಂ ಕ್ಷಾಂತಿರಾರ್ಜವಮೇವ ಚ । ಜ್ಞಾನಂ ವಿಜ್ಞಾನಮಾಸ್ತಿಕ್ಯಂ ಬ್ರಹ್ಮ-ಕರ್ಮ ಸ್ವ-ಭಾವ-ಜಮ್ ॥
ದೇವನಲ್ಲಿ ನಿಷ್ಠೆ, ಇಂದ್ರಿಯನಿಗ್ರಹ, ಉಪವಾಸಾದಿ ವ್ರತಗಳು, ಮೈಮನಗಳ ಮಡಿ, ಕ್ಷಮೆ, ನೇರ ನಡೆ-ನುಡಿ, ಜ್ಞಾನ-ವಿಜ್ಞಾನ ಮತ್ತು ಆಸ್ತಿಕತೆ ಇವು ಬ್ರಾಹ್ಮಣ ಸ್ವಭಾವದ ಸಹಜ ಕರ್ಮಗಳು.
43 ಶೌರ್ಯಂ ತೇಜೋ ಧೃತಿರ್ದಾಕ್ಷ್ಯಂ ಯುದ್ಧೇ ಚಾಪ್ಯಪಲಾಯನಮ್ । ದಾನಮೀಶ್ವರ-ಭಾವಶ್ಚ ಕ್ಷಾತ್ರಂ ಕರ್ಮ ಸ್ವ-ಭಾವ-ಜಮ್ ॥
ಶೂರತನ, ಬಲ, ಧೈರ್ಯ, ದಕ್ಷತೆ, ಹೋರಾಟದಲ್ಲಿ ಹಿಂದೆ ಓಡದಿರುವುದು, ದಾನ ಮತ್ತು ಒಡೆತನ ಇವು ಕ್ಷತ್ರಿಯ ಸ್ವಭಾವದ ಸಹಜ ಕರ್ಮಗಳು.
44 ಕೃಷಿ-ಗೋ-ರಕ್ಷ-ವಾಣಿಜ್ಯಂ ವೈಶ್ಯ-ಕರ್ಮ ಸ್ವ-ಭಾವ-ಜಮ್ । ಪರಿಚರ್ಯಾತ್ಮಕಂ ಕರ್ಮ ಶೂದ್ರಸ್ಯಾಪಿ ಸ್ವ-ಭಾವ-ಜಮ್ ॥
ವ್ಯವಸಾಯ, ದನಸಾಕಣೆ ಮತ್ತು ವ್ಯಾಪಾರ ವೈಶ್ಯರ ಸ್ವಭಾವಸಹಜವಾದ ಕರ್ಮಗಳು. ಸೇವಾರೂಪವಾದ ಕೆಲಸ ಶೂದ್ರ ಸ್ವಭಾವಕ್ಕೆ ಸಹಜವಾದದ್ದು.
45 ಸ್ವೇ ಸ್ವೇ ಕರ್ಮಣ್ಯಭಿ-ರತಃ ಸಂಸಿದ್ಧಿಂ ಲಭತೇ ನರಃ । ಸ್ವ-ಕರ್ಮ-ನಿರತಃ ಸಿದ್ಧಿಂ ಯಥಾ ವಿಂದತಿ ತಚ್ಛೃಣು ॥
ತನ್ನತನ್ನ ಸಹಜ ಕರ್ಮದಲ್ಲಿ ಪೂರ್ತಿ ತೊಡಗಿದ ಮನುಷ್ಯ ಚೆನ್ನಾಗಿ ಸಿದ್ಧಿಯನ್ನು ಪಡೆಯುತ್ತಾನೆ. ತನ್ನ ಕೆಲಸದಲ್ಲಿ ನಿರತನು ಹೇಗೆ ಸಿದ್ಧಿಯನ್ನು ಪಡೆವನು ಎನ್ನುವುದನ್ನು ಕೇಳಿಕೊ.
46 ಯತಃ ಪ್ರವೃತ್ತಿರ್ಭೂತಾನಾಂ ಯೇನ ಸರ್ವಮಿದಂ ತತಮ್ । ಸ್ವ-ಕರ್ಮಣಾ ತಮಭ್ಯರ್ಚ್ಯ ಸಿದ್ಧಿಂ ವಿಂದತಿ ಮಾನವಃ ॥
ಎಲ್ಲರ ಎಲ್ಲ ಕರ್ಮಗಳನ್ನು (ಒಳಗಿನಿಂದ) ನಡೆಸುವ, ಇದೆಲ್ಲವನ್ನು (ಹೊರಗಿನಿಂದ) ವ್ಯಾಪಿಸಿರುವ ದೇವನನ್ನು ಮನುಷ್ಯನು ಸ್ವಭಾವಸಹಜವಾದ ಕರ್ಮದಿಂದ ಪೂರ್ತಿ ಆರಾಧಿಸಿ ಸಿದ್ಧಿಯನ್ನು ಹೊಂದುವನು.
47 ಶ್ರೇಯಾನ್ ಸ್ವ-ಧರ್ಮೋ ವಿಗುಣಃ ಪರ-ಧರ್ಮಾತ್ ಸ್ವನುಷ್ಠಿತಾತ್ । ಸ್ವ-ಭಾವ-ನಿಯತಂ ಕರ್ಮ ಕುರ್ವನ್ ನಾಽಪ್ನೋತಿ ಕಿಲ್ಬಿಷಮ್ ॥
ಚೆನ್ನಾಗಿ ನಡೆಸಿದ ಪರಧರ್ಮಕ್ಕಿಂತ ತನ್ನ ಸಹಜಧರ್ಮವು ಕೊರತೆ ಹೊಂದಿದ್ದರೂ ಶ್ರೇಷ್ಠವೇ ಆಗಿದೆ. ತನ್ನ ಸ್ವಭಾವಕ್ಕೆ ಸರಿಯಾದ ಕರ್ಮ ಮಾಡಿದಾಗ ಪಾಪ ಹೊಂದುವುದಿಲ್ಲ.
48 ಸಹ-ಜಂ ಕರ್ಮ ಕೌಂತೇಯ ಸ-ದೋಷಮಪಿ ನ ತ್ಯಜೇತ್ । ಸರ್ವಾರಂಭಾ ಹಿ ದೋಷೇಣ ಧೂಮೇನಾಗ್ನಿರಿವಾಽಮೃತಾಃ ॥
ಓ ಕೌಂತೇಯನೆ, ಸಹಜವಾದ ಕರ್ಮವನ್ನು ದೋಷ ಇದ್ದರೂ ಬಿಡಬಾರದು. ಬೆಂಕಿಯು ಹೊಗೆಯಿಂದ ಮುಚ್ಚಿಕೊಂಡಿರುವಂತೆ ಎಲ್ಲ ಕರ್ಮಗಳೂ ದೋಷದಿಂದಲೆ ಕೂಡಿರುತ್ತವೆ.
49 ಅಸಕ್ತ-ಬುದ್ಧಿಃ ಸರ್ವತ್ರ ಜಿತಾತ್ಮಾ ವಿಗತ-ಸ್ಪೃಹಃ । ನೈಷ್ಕರ್ಮ್ಯ-ಸಿದ್ಧಿಂ ಪರಮಾಂ ಸಂನ್ಯಾಸೇನಾಧಿಗಚ್ಛತಿ ॥
ಮನಸ್ಸನ್ನು ಗೆದ್ದು ಎಲ್ಲಿಯೂ ಬುದ್ಧಿಯನ್ನು ಅಂಟಿಸಿಕೊಳ್ಳದೆ ಆಸೆ ತೊರೆದವನು ಇಂಥ ಸಂನ್ಯಾಸದಿಂದ ಅನಿಷ್ಟಕರ್ಮಗಳ ನಾಶವೆಂಬ ಉತ್ತಮ ಸಿದ್ಧಿಯನ್ನು ಪಡೆಯುತ್ತಾನೆ.
50 ಸಿದ್ಧಿಂ ಪ್ರಾಪ್ತೋ ಯಥಾ ಬ್ರಹ್ಮ ತಥಾಽಽಪ್ನೋತಿ ನಿಬೋಧ ಮೇ । ಸಮಾಸೇನೈವ ಕೌಂತೇಯ ನಿಷ್ಠಾ ಜ್ಞಾನಸ್ಯ ಯಾ ಪರಾ ॥
ಓ ಕೌಂತೇಯನೆ, ಯಾವ ರೀತಿಯ ಸಿದ್ಧಿ ಪಡೆದವನು ಹೇಗೆ ಬ್ರಹ್ಮನನ್ನು ಹೊಂದುತ್ತಾನೆ ಎನ್ನುವುದನ್ನು ಸಂಗ್ರಹವಾಗಿ ನನ್ನಿಂದ ಕೇಳು. ಈ ಸಿದ್ಧಿ ಜ್ಞಾನದ ಕೊನೆಯ ಹಂತ.
51 ಬುದ್ಧ್ಯಾವಿಶುದ್ಧಯಾ ಯುಕ್ತೋ ಧೃತ್ಯಾಽಽತ್ಮಾನಂ ನಿಯಮ್ಯ ಚ । ಶಬ್ದಾದೀನ್ ವಿಷಯಾಂಸ್ತ್ಯಕ್ತ್ವಾ ರಾಗ-ದ್ವೇಷೌ ವ್ಯುದಸ್ಯ ಚ ॥
ಶುದ್ಧವಾದ ಬುದ್ಧಿ ಇರಬೇಕು. ಧೈರ್ಯದಿಂದ ತನ್ನನ್ನೇ ಯಮ-ನಿಯಮಗಳಲ್ಲಿ ತೊಡಗಿಸಬೇಕು. ಶಬ್ದ ಮುಂತಾದ ಇಂದ್ರಿಯ ವಿಷಯಗಳನ್ನು ಬಿಡಬೇಕು. ಪ್ರೀತಿ-ವೈರಗಳನ್ನು ಬಿಟ್ಟಿರಬೇಕು.
52 ವಿವಿಕ್ತ-ಸೇವೀ ಲಘ್ವಾಶೀ ಯತ-ವಾಕ್ಕಾಯ-ಮಾನಸಃ । ಧ್ಯಾನ-ಯೋಗ-ಪರೋ ನಿತ್ಯಂ ವೈರಾಗ್ಯಂ ಸಮುಪಾಶ್ರಿತಃ ॥
ಏಕಾಂತದಲ್ಲಿ ಇರಬೇಕು. ಲಘು ಆಹಾರ ಸೇವಿಸಬೇಕು. ಮಾತು-ದೇಹ-ಮನಸ್ಸುಗಳನ್ನು ನಿಗ್ರಹಿಸಬೇಕು. ನಿತ್ಯವೂ ಧ್ಯಾನಯೋಗವನ್ನು ನಡೆಸುತ್ತ ವೈರಾಗ್ಯವನ್ನು ಹೊಂದಬೇಕು.
53 ಅಹಂ-ಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಪರಿಗ್ರಹಮ್ । ವಿಮುಚ್ಯ ನಿರ್ಮಮಃ ಶಾಂತೋ ಬ್ರಹ್ಮ-ಭೂಯಾಯ ಕಲ್ಪತೇ ॥
ಬಲಾತ್ಕಾರ, ಸೊಕ್ಕು, ಕಾಮ, ಕೋಪಗಳನ್ನು ಬಿಡಬೇಕು. ಯಾರಿಂದಲೂ ಏನನ್ನೂ ಪಡೆಯಬಾರದು. ನಾನು-ನನ್ನದು ಎಂಬ ಅಭಿಮಾನ ತೊರೆದು ಆನಂದವಾಗಿರಬೇಕು. ಆಗ ಮನಸ್ಸು ಬ್ರಹ್ಮನಲ್ಲಿ ನೆಲೆಗೊಳ್ಳುತ್ತದೆ.
54 ಬ್ರಹ್ಮ-ಭೂತಃ ಪ್ರಸನ್ನಾತ್ಮಾ ನ ಶೋಚತಿ ನ ಕಾಂಕ್ಷತಿ । ಸಮಃ ಸರ್ವೇಷು ಭೂತೇಷು ಮದ್ಭಕ್ತಿಂ ಲಭತೇ ಪರಾಮ್ ॥
ಬ್ರಹ್ಮನಲ್ಲಿ ನೆಲೆಸಿದವನು ಮನಸ್ಸು ಶಾಂತವಾಗಿ ಯಾವುದಕ್ಕೂ ದುಃಖಿಸುವುದಿಲ್ಲ, ಯಾವುದನ್ನೂ ಬಯಸುವುದಿಲ್ಲ. ಎಲ್ಲ ಜೀವಿಗಳಲ್ಲೂ ಸಮನಾಗಿದ್ದು ನನ್ನಲ್ಲಿ ಹೆಚ್ಚಿನ ಭಕ್ತಿಯನ್ನು ಹೊಂದುತ್ತಾನೆ.
55 ಭಕ್ತ್ಯಾ ಮಾಮಭಿ-ಜಾನಾತಿ ಯಾವಾನ್ ಯಶ್ಚಾಸ್ಮಿ ತತ್ತ್ವತಃ । ತತೋ ಮಾಂ ತತ್ತ್ವತೋ ಜ್ಞಾತ್ವಾ ವಿಶತೇ ತದನಂತರಮ್ ॥
ಭಕ್ತಿಯಿಂದ, ನಾನು ಎಂಥವನು! ನಿಜವಾಗಿ ನಾನು ಹೇಗಿದ್ದೇನೆ! ಎಂದು ನನ್ನನ್ನು ಪೂರ್ತಿ ಸರಿಯಾಗಿ ತಿಳಿಯುತ್ತಾನೆ. ಭಕ್ತಿಯಿಂದ ಸರಿಯಾಗಿ ನನ್ನನ್ನು ತಿಳಿದು ಅನಂತರ ನನ್ನನ್ನೆ ಸೇರುತ್ತಾನೆ.
56 ಸರ್ವ-ಕರ್ಮಾಣ್ಯಪಿ ಸದಾ ಕುರ್ವಾಣೋ ಮದ್ವ್ಯಪಾಶ್ರಯಃ । ಮತ್ಪ್ರಸಾದಾದವಾಪ್ನೋತಿ ಶಾಶ್ವತಂ ಪದಮವ್ಯಯಮ್ ॥
ನನ್ನನ್ನೇ ಆಶ್ರಯಿಸಿದವನು, ಎಲ್ಲ ಕೆಲಸಗಳನ್ನೂ ಯಾವಾಗಲೂ ಮಾಡುತ್ತಿರುವವನು, ನನ್ನ ಅನುಗ್ರಹದಿಂದ ನಾಶವಿಲ್ಲದ ನಿತ್ಯವಾದ ಸ್ಥಾನವನ್ನು ಹೊಂದುತ್ತಾನೆ.
57 ಚೇತಸಾ ಸರ್ವ-ಕರ್ಮಾಣಿ ಮಯಿ ಸಂನ್ಯಸ್ಯ ಮತ್ಪರಃ । ಬುದ್ಧಿ-ಯೋಗಮುಪಾಶ್ರಿತ್ಯ ಮಚ್ಚಿತ್ತಃ ಸತತಂ ಭವ ॥
ಬುದ್ಧಿಪೂರ್ವಕ ಎಲ್ಲ ಕೆಲಸಗಳನ್ನು ನನಗೆ ಸಮರ್ಪಿಸಿ, ನಾನೇ ಸರ್ವೋತ್ತಮನೆಂದು ತಿಳಿದು ಜ್ಞಾನಯೋಗವನ್ನು ನಡೆಸಿ ನಿತ್ಯವೂ ನನ್ನನ್ನೆ ಯೋಚಿಸುವವನು ಆಗು.
58 ಮಚ್ಚಿತ್ತಃ ಸರ್ವ-ದುರ್ಗಾಣಿ ಮತ್ಪ್ರಸಾದಾತ್ ತರಿಷ್ಯಸಿ । ಅಥ ಚೇತ್ ತ್ವಮಹಂ-ಕಾರಾತ್ ನ ಶ್ರೋಷ್ಯಸಿ ವಿನಂಕ್ಷ್ಯಸಿ ॥
ನನ್ನನ್ನೆ ಯೋಚಿಸುತ್ತ ನೀನು ನನ್ನ ಅನುಗ್ರಹದಿಂದ ಎಲ್ಲಾ ತೊಂದರೆಗಳನ್ನು ದಾಟುವೆ. ಮತ್ತೆ ನೀನು ಅಹಂಕಾರದಿಂದ ಕೇಳದಿದ್ದರೆ ನಾಶವಾಗುವೆ.
59 ಯದಹಂ-ಕಾರಮಾಶ್ರಿತ್ಯ ನ ಯೋತ್ಸ್ಯ ಇತಿ ಮನ್ಯಸೇ । ಮಿಥ್ಯೈಷ ವ್ಯವಸಾಯಸ್ತೇ ಪ್ರಕೃತಿಸ್ತ್ವಾಂ ನಿಯೋಕ್ಷ್ಯತಿ ॥
ದುರಹಂಕಾರದಿಂದ ಹೋರಾಡುವುದಿಲ್ಲ ಎಂದು ತಿಳಿದೆಯಾದರೆ, ನಿನ್ನ ಈ ಯೋಚನೆ ಸುಳ್ಳು. ನಿನ್ನನ್ನು ನಿನ್ನ ಸ್ವಭಾವವೆ ಹೋರಾಡಿಸುತ್ತದೆ.
60 ಸ್ವ-ಭಾವ-ಜೇನ ಕೌಂತೇಯ ನಿಬದ್ಧಃ ಸ್ವೇನ ಕರ್ಮಣಾ । ಕರ್ತುಂ ನೇಚ್ಛಸಿ ಯನ್ಮೋಹಾತ್ ಕರಿಷ್ಯಸ್ಯವಶೋಽಪಿ ತತ್ ॥
ಓ ಕೌಂತೇಯನೆ, ಸ್ವಭಾವಸಹಜವಾದ ನಿನ್ನ ಕರ್ಮದಿಂದ ಕಟ್ಟಿಹಾಕಲ್ಪಟ್ಟಿರುವೆ. ಅಜ್ಞಾನದಿಂದಾಗಿ ಯಾವುದನ್ನು ಮಾಡಲು ಬಯಸುವುದಿಲ್ಲ ಅದನ್ನು ಗೊತ್ತಿಲ್ಲದೆಯೆ (ದೇವರ ವಶನಾಗಿ) ಮಾಡುವೆ.
61 ಈಶ್ವರಃ ಸರ್ವ-ಭೂತಾನಾಂ ಹೃದ್ದೇಶೇಽರ್ಜುನ ತಿಷ್ಠತಿ । ಭ್ರಾಮಯನ್ ಸರ್ವ-ಭೂತಾನಿ ಯಂತ್ರಾರೂಢಾನಿ ಮಾಯಯಾ ॥
ಓ ಅರ್ಜುನನೆ, ಎಲ್ಲ ಜೀವಿಗಳ ಹೃದಯದಲ್ಲಿ ದೇವರು ಇದ್ದಾನೆ. ವಿಶ್ವಯಂತ್ರವನ್ನು ಹತ್ತಿರುವ ಎಲ್ಲರನ್ನೂ ತನ್ನ ಇಚ್ಛೆಯಿಂದ - ಪ್ರಕೃತಿಯ ಮಾಯೆಯಿಂದ ತಿರುಗಿಸುತ್ತ ಇದ್ದಾನೆ.
62 ತಮೇವ ಶರಣಂ ಗಚ್ಛ ಸರ್ವ-ಭಾವೇನ ಭಾರತ । ತತ್-ಪ್ರಸಾದಾತ್ ಪರಾಂ ಶಾಂತಿಂ ಸ್ಥಾನಂ ಪ್ರಾಪ್ಸ್ಯಸಿ ಶಾಶ್ವತಮ್ ॥
ಓ ಭಾರತನೆ, ಪೂರ್ಣ ಭಕ್ತಿಯಿಂದ ಅವನನ್ನೆ ಶರಣು ಹೊಂದು. ಅವನ ಅನುಗ್ರಹದಿಂದ ಪೂರ್ಣಸುಖವನ್ನೂ ನಿತ್ಯವಾದ ತಾಣವನ್ನೂ ಹೊಂದುವೆ.
63 ಇತಿ ತೇ ಜ್ಞಾನಮಾಖ್ಯಾತಂ ಗುಹ್ಯಾದ್ ಗುಹ್ಯ-ತರಂ ಮಯಾ । ವಿಮೃಶ್ಶೈತದಶೇಷೇಣ ಯಥೇಚ್ಛಸಿ ತಥಾ ಕುರು ॥
ಹೀಗೆ ನಿನಗೆ ನಾನು ಅತ್ಯಂತ ರಹಸ್ಯವಾದ ಜ್ಞಾನವನ್ನು ಹೇಳಿರುವೆ. ಇದನ್ನೆಲ್ಲ ವಿಮರ್ಶೆ ಮಾಡಿ ನಿನ್ನ ಇಚ್ಛೆಯಂತೆ ಮಾಡು.
64 ಸರ್ವ-ಗುಹ್ಯ-ತಮಂ ಭೂಯಃ ಶೃಣು ಮೇ ಪರಮಂ ವಚಃ । ಇಷ್ಟೋಽಸಿ ಮೇ ದೃಢಮಿತಿ ತತೋ ವಕ್ಷ್ಯಾಮಿ ತೇ ಹಿತಮ್ ॥
ಎಲ್ಲಕ್ಕಿಂತ ಹೆಚ್ಚು ರಹಸ್ಯವಾದ ನನ್ನ ಈ ಉತ್ತಮ ಮಾತನ್ನು ಮತ್ತೊಮ್ಮೆ ಕೇಳು-ನೀನು ನನಗೆ ತುಂಬಾ ಪ್ರಿಯನು ಎಂದು. ಆದ್ದರಿಂದಲೆ ನಿನಗೆ ಒಳ್ಳೆಯದನ್ನು ಹೇಳುತ್ತಿದ್ದೇನೆ.
65 ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು । ಮಾಮೇವೈಷ್ಯಸಿ ಸತ್ಯಂ ತೇ ಪ್ರತಿಜಾನೇ ಪ್ರಿಯೋಽಸಿ ಮೇ ॥
ನನ್ನಲ್ಲೆ ಮನಸ್ಸಿಡು. ನನ್ನ ಭಕ್ತನಾಗು, ನನ್ನನ್ನೆ ಪೂಜಿಸು. ನನ್ನನ್ನೇ ನಮಿಸು. ನನ್ನನ್ನೇ ಸೇರುವೆ. ನಿನಗೆ ಆಣೆ ಮಾಡಿ ಸತ್ಯ ಹೇಳುತ್ತಿದ್ದೇನೆ - ನನಗೆ ನೀನು ಇಷ್ಟ.
66 ಸರ್ವ-ಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ । ಅಹಂ ತ್ವಾ ಸರ್ವ-ಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ ॥
ಇತರ ಎಲ್ಲರ ಆಚರಣೆಗಳನ್ನು ಪೂರ್ತಿ ಬಿಟ್ಟು ನನ್ನನ್ನೊಬ್ಬನನ್ನೆ ಶರಣು ಹೊಂದು. ನಾನು ನಿನ್ನನ್ನು ಎಲ್ಲ ಪಾಪಗಳಿಂದಲೂ ಬಿಡುಗಡೆಗೊಳಿಸುತ್ತೇನೆ, ದುಃಖಿಸಬೇಡ.
67 ಇದಂ ತೇ ನಾತಪಸ್ಕಾಯ ನಾಭಕ್ತಾಯ ಕದಾಚನ । ನ ಚಾಶುಶ್ರೂಷವೇ ವಾಚ್ಯಂ ನ ಚ ಮಾಂ ಯೋಽಭ್ಯಸೂಯತಿ ॥
ಇದನ್ನು ನೀನು ವ್ರತ-ಉಪವಾಸ ಮಾಡದವರಿಗೆ ಹೇಳಬೇಡ. ಭಕ್ತನಲ್ಲದವನಿಗೆ ಎಂದಿಗೂ ಹೇಳದಿರು. ಕೇಳುವ ಇಚ್ಛೆ ಇಲ್ಲದವನಿಗೂ ಹೇಳಬೇಡ. ನನ್ನ ಬಗ್ಗೆ ಮತ್ಸರ ಉಳ್ಳವರಿಗೂ ಹೇಳದಿರು.
68 ಯ ಇಮಂ ಪರಮಂ ಗುಹ್ಯಂ ಮದ್-ಭಕ್ತೇಷ್ವಭಿ-ಧಾಸ್ಯತಿ । ಭಕ್ತಿಂ ಮಯಿ ಪರಾಂ ಕೃತ್ವಾ ಮಾಮೇವೈಷ್ಯತ್ಯಸಂಶಯಃ ॥
ತುಂಬ ರಹಸ್ಯವಾದ ಇದನ್ನು ನನ್ನ ಭಕ್ತರಲ್ಲಿ ತಿಳಿಸುವವನು ನನ್ನಲ್ಲಿ ಶ್ರೇಷ್ಠ ಭಕ್ತಿಯನ್ನು ಮಾಡಿ ನನ್ನನ್ನೆ ಸೇರುವನು, ಸಂಶಯವಿಲ್ಲ.
69 ನ ಚ ತಸ್ಮಾನ್ಮನುಷ್ಯೇಷು ಕಶ್ಚಿನ್ಮೇ ಪ್ರಿಯ-ಕೃತ್ತಮಃ । ಭವಿತಾ ನ ಚ ಮೇ ತಸ್ಮಾತ್ ಅನ್ಯಃ ಪ್ರಿಯ-ತರೋ ಭುವಿ ॥
ಮನುಷ್ಯರಲ್ಲಿ ಅವನಿಗಿಂತ ಹೆಚ್ಚು ಇಷ್ಟನು ನನಗೆ ಇನ್ನೊಬ್ಬನು ಇಲ್ಲ. ಅವನಿಗಿಂತ ಹೆಚ್ಚು ಇಷ್ಟನಾದ ಇನ್ನೊಬ್ಬ ಭೂಮಿಯಲ್ಲಿ ಮುಂದೆಯೂ ಹುಟ್ಟಲಾರ.
70 ಅಧ್ಯೇಷ್ಯತೇ ಚ ಯ ಇಮಂ ಧರ್ಮ್ಯಂ ಸಂವಾದಮಾವಯೋಃ । ಜ್ಞಾನ-ಯಜ್ಞೇನ ತೇನಾಹಂ ಇಷ್ಟಃ ಸ್ಯಾಮಿತಿ ಮೇ ಮತಿಃ ॥
ಧರ್ಮಕ್ಕೆ ಸಂಬಂಧಿಸಿದ ನಮ್ಮ ಈ ಪ್ರಶ್ನೋತ್ತರವನ್ನು ಅಧ್ಯಯನ ಮಾಡುವವನೂ ಆ ಜ್ಞಾನಯಜ್ಞದಿಂದ ನನ್ನನ್ನು ಪೂಜಿಸಿದನೆಂದೆ ನನ್ನ ಮತ.
71 ಶ್ರ್ರದ್ಧಾ-ವಾನನಸೂಯಶ್ಚ ಶೃಣುಯಾದಪಿ ಯೋ ನರಃ । ಸೋಽಪಿ ಮುಕ್ತಃ ಶುಭಾನ್ ಲೋಕಾನ್ ಪ್ರಾಪ್ನುಯಾತ್ಪುಣ್ಯ-ಕರ್ಮಣಾಮ್ ॥
ಶ್ರದ್ಧೆ ಉಳ್ಳ, ಮತ್ಸರಪಡದ ಮನುಷ್ಯನು ಕೇಳಿದರೂ ಅಂಥವನು ಪಾಪದಿಂದ ಬಿಡುಗಡೆ ಹೊಂದಿ ಪುಣ್ಯಕರ್ಮ ಮಾಡಿದವರ ಒಳ್ಳೆಯ ಲೋಕಗಳನ್ನು ಪಡೆದಾನು.
72 ಕಚ್ಚಿದೇತಚ್ಛ್ರುತಂ ಪಾರ್ಥ ತ್ವಯೈಕಾಗ್ರೇಣ ಚೇತಸಾ । ಕಚ್ಚಿದಜ್ಞಾನ-ಸಂಮೋಹಃ ಪ್ರನಷ್ಟಸ್ತೇ ಧನಂ-ಜಯ ॥
ಓ ಪಾರ್ಥನೆ, ಒಂದೇ ಕಡೆ ಗಮನವಿತ್ತು ಇದನ್ನು ನೀನು ಕೇಳಿದೆಯಾ? ಓ ಧನಂಜಯನೆ, ನಿನ್ನ ಅಜ್ಞಾನದ ಗೊಂದಲ ಪೂರ್ತಿ ಹೋಯಿತೆ?
ಅರ್ಜುನ ಉವಾಚ
73 ನಷ್ಟೋ ಮೋಹಃ ಸ್ಮೃತಿರ್ಲಬ್ಧಾ ತ್ವತ್-ಪ್ರಸಾದಾನ್ಮಯಾಽಚ್ಯುತ । ಸ್ಥಿತೋಽಸ್ಮಿ ಗತ-ಸಂದೇಹಃ ಕರಿಷ್ಯೇ ವಚನಂ ತವ ॥
ಅರ್ಜುನನು ಹೇಳಿದನು - ಅಚ್ಯುತನೆ, ಅಜ್ಞಾನ ಹೋಯಿತು. ನಿನ್ನ ಅನುಗ್ರಹದಿಂದ ನನಗೆ ನೆನಪು ಬಂತು. ಸಂಶಯ ಹೋಗಿ ಸರಿಯಾಗಿದ್ದೇನೆ. ನಿನ್ನ ಮಾತನ್ನು ನಡೆಸುವೆನು.
74 ಇತ್ಯಹಂ ವಾಸು-ದೇವಸ್ಯ ಪಾರ್ಥಸ್ಯ ಚ ಮಹಾತ್ಮನಃ । ಸಂವಾದಮಿಮಮಶ್ರೌಷಂ ಅದ್ಭುತಂ ರೋಮ-ಹರ್ಷಣಮ್ ॥
ಇಷ್ಟು ನಾನು ಮಹಾತ್ಮರಾದ ಕೃಷ್ಣ ಮತ್ತು ಅರ್ಜುನರ ಅಚ್ಚರಿಯ, ರೋಮಾಂಚನದ ಈ ಪ್ರಶ್ನೋತ್ತರವನ್ನು ಕೇಳಿದೆ.
75 ವ್ಯಾಸ-ಪ್ರಸಾದಾಚ್ಛ್ರುತವಾನ್ ಏತದ್ ಗುಹ್ಯಮಹಂ ಪರಮ್ । ಯೋಗಂ ಯೋಗೇಶ್ವರಾತ್ ಕೃಷ್ಣಾತ್ ಸಾಕ್ಷಾತ್ ಕಥಯತಃ ಸ್ವಯಮ್ ॥
ಶ್ರೀವೇದವ್ಯಾಸರ ಅನುಗ್ರಹದಿಂದ ನಾನು, ಈ ಅತಿರಹಸ್ಯ ವಿಷಯವಾದ ಯೋಗವನ್ನು, ಎಲ್ಲ ಯೋಗಗಳ ಒಡೆಯನಾದ ಕೃಷ್ಣನಿಂದ ನೇರ ಹೇಳುತ್ತಿರುವಾಗಲೆ ಕೇಳಿದೆನು.
76 ರಾಜನ್ ಸಂಸ್ಮೃತ್ಯ-ಸಂಸ್ಮೃತ್ಯ ಸಂವಾದಮಿಮಮದ್ಭುತಮ್ । ಕೇಶವಾರ್ಜುನಯೋಃ ಪುಣ್ಯಂ ಹೃಷ್ಯಾಮಿ ಚ ಮುಹುರ್ಮುಹುಃ ॥
ಓ ಧೃತರಾಷ್ಟ್ರರಾಜನೆ, ಕೃಷ್ಣಾರ್ಜುನರ ಅಚ್ಚರಿಯ ಈ ಪುಣ್ಯಪ್ರದವಾದ ಸಂಭಾಷಣೆಯನ್ನು ನೆನೆಯುತ್ತ ನೆನೆಯುತ್ತ ಮತ್ತೆ ಮತ್ತೆ ಖುಷಿಪಡುತ್ತಿದ್ದೇನೆ.
77 ತಚ್ಚ ಸಂಸ್ಮೃತ್ಯ-ಸಂಸ್ಮೃತ್ಯ ರೂಪಮತ್ಯದ್ಭುತಂ ಹರೇಃ । ವಿಸ್ಮಯೋ ಮೇ ಮಹಾನ್ ರಾಜನ್ ಹೃಷ್ಯಾಮಿ ಚ ಪುನಃ-ಪುನಃ ॥
ಓ ರಾಜನೆ, ಕೃಷ್ಣನ ಆ ಅತ್ಯಾಶ್ಚರ್ಯದ ವಿಶ್ವರೂಪವನ್ನು ನೆನೆಯುತ್ತ ನೆನೆಯುತ್ತ ನನಗೆ ತುಂಬಾ ಬೆರಗಾಗುತ್ತಿದೆ. ಮತ್ತೆ ಮತ್ತೆ ಖುಷಿಪಡುತ್ತಿರುವೆನು.
78 ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ । ತತ್ರ ಶ್ರೀರ್ವಿಜಯೋ ಭೂತಿಃ ಧ್ರುವಾ ನೀತಿರ್ಮತಿರ್ಮಮ ॥
ಯೋಗಗಳ ಒಡೆಯನಾದ ಕೃಷ್ಣನು ಇರುವಲ್ಲಿ, ಬಿಲ್ಲು ಹಿಡಿದ ಅರ್ಜುನನು ಇರುವಲ್ಲಿ, ಶ್ರೀಮಂತಿಕೆ, ಗೆಲುವು, ಏಳಿಗೆ ಮತ್ತು ಸ್ಥಿರವಾದ ನೀತಿ ಇದೆ ಎಂದು ನನ್ನ ಆಶಯ.

ಇತಿ ಅಷ್ಟಾದಶೋಽಧ್ಯಾಯಃ

ಶ್ರೀ ವೇದವ್ಯಾಸರು ರಚಿಸಿದ ಲಕ್ಷಶ್ಲೋಕದ ಶ್ರೀ ಮಹಾಭಾರತಸಂಹಿತೆಯ ಭೀಷ್ಮಮಹಾಪರ್ವದಲ್ಲಿನ ಶ್ರೀಕೃಷ್ಣಾರ್ಜುನ ಸಂವಾದರೂಪವಾದ ಭಗವದ್ಗೀತಾ ಅವಾಂತರಪರ್ವದಲ್ಲಿ ೨೫ರಿಂದ ೪೨ ಅಧ್ಯಾಯಗಳಿವು.