|
1
|
ಪರಂ ಭೂಯಃ ಪ್ರವಕ್ಷ್ಯಾಮಿ ಜ್ಞಾನಾನಾಂ ಜ್ಞಾನಮುತ್ತಮಮ್ ।
ಯಜ್ಜ್ಞಾತ್ವಾ ಮುನಯಃ ಸರ್ವೇ ಪರಾಂ ಸಿದ್ಧಿಮಿತೋ ಗತಾಃ ॥ |
|
ಕೃಷ್ಣನು ಹೇಳಿದನು - ತಿಳಿಯಬೇಕಾದ ಸಂಗತಿಗಳಲ್ಲಿ ಶ್ರೇಷ್ಠವಾದ ಜ್ಞಾನವನ್ನು ಇನ್ನೂ ಹೆಚ್ಚಿಗೆ ಹೇಳುತ್ತೇನೆ. ಎಲ್ಲ ಮುನಿಗಳು ಇದನ್ನು ತಿಳಿದು ಇಲ್ಲಿಂದ ತೆರಳಿ ಉತ್ತಮ ಗತಿಯನ್ನು ಹೊಂದಿದರು. |
|
2
|
ಇದಂ ಜ್ಞಾನಮುಪಾಶ್ರಿತ್ಯ ಮಮ ಸಾಧರ್ಮ್ಯಮಾಗತಾಃ ।
ಸರ್ಗೇಽಪಿ ನೋಪ-ಜಾಯಂತೇ ಪ್ರಳಯೇ ನ ವ್ಯಥಂತಿ ಚ ॥ |
|
ಈ ಜ್ಞಾನವನ್ನು ಗುರುಗಳಿಂದ ಚೆನ್ನಾಗಿ ಪಡೆದು ನನ್ನ ಸೇವೆಯಿಂದ ನನ್ನೆಡೆಗೆ ಬಂದವರು ಸೃಷ್ಟಿಕಾಲದಲ್ಲಿಯೂ ಹುಟ್ಟುವುದಿಲ್ಲ ಮತ್ತು ಪ್ರಳಯಕಾಲದಲ್ಲಿಯೂ ಬಾಧೆ ಪಡುವುದಿಲ್ಲ. |
|
3
|
ಮಮ ಯೋನಿರ್ಮಹದ್-ಬ್ರಹ್ಮ ತಸ್ಮಿನ್ ಗರ್ಭಂ ದಧಾಮ್ಯಹಮ್ ।
ಸಂಭವಃ ಸರ್ವ-ಭೂತಾನಾಂ ತತೋ ಭವತಿ ಭಾರತ ॥ |
|
ಓ ಭಾರತನೆ, ಪ್ರಕೃತಿ (ಲಕ್ಷ್ಮಿ) ನನ್ನ ಪತ್ನಿ. ಅವಳಲ್ಲಿ ನಾನು ಗರ್ಭವನ್ನು ನೀಡುತ್ತೇನೆ. ಅಲ್ಲಿಂದ ಎಲ್ಲ ಜೀವಿಗಳ ಹುಟ್ಟು ಆಗುತ್ತದೆ. |
|
4
|
ಸರ್ವ-ಯೋನಿಷು ಕೌಂತೇಯ ಮೂರ್ತಯಃ ಸಂಭವಂತಿ ಯಾಃ ।
ತಾಸಾಂ ಬ್ರಹ್ಮ ಮಹದ್ಯೋನಿಃ ಅಹಂ ಬೀಜ-ಪ್ರದಃ ಪಿತಾ ॥ |
|
ಓ ಕೌಂತೇಯನೆ, ಯಾವೆಲ್ಲ ಜಾತಿಗಳಲ್ಲಿ ಏನೆಲ್ಲ ದೇಹಗಳು ಹುಟ್ಟುತ್ತವೆಯೋ ಅವುಗಳಿಗೆಲ್ಲ ಚಿತ್ಪ್ರಕೃತಿಯೇ ತಾಯಿ, ನಾನೇ ಬೀಜಬಿತ್ತಿದ ತಂದೆ. |
|
5
|
ಸತ್ವಂ ರಜಸ್ತಮ ಇತಿ ಗುಣಾಃ ಪ್ರಕೃತಿ-ಸಂಭವಾಃ ।
ನಿಬಧ್ನಂತಿ ಮಹಾ-ಬಾಹೋ ದೇಹೇ ದೇಹಿನಮವ್ಯಯಮ್ ॥ |
|
ಓ ಮಹಾಬಾಹುವೆ, ಜಡಪ್ರಕೃತಿಯಿಂದ ಉಂಟಾದ ಸತ್ವ-ರಜಸ್ಸು-ತಮಸ್ಸು ಎಂಬ ಮೂರು ಗುಣಗಳು, ನಾಶವಿಲ್ಲದ ಜೀವನನ್ನು ದೇಹದಲ್ಲಿ ಕಟ್ಟಿಹಾಕುತ್ತವೆ. |
|
6
|
ತತ್ರ ಸತ್ವಂ ನಿರ್ಮಲತ್ವಾತ್ ಪ್ರಕಾಶಕಮನಾಮಯಮ್ ।
ಸುಖ-ಸಂಗೇನ ಬಧ್ನಾತಿ ಜ್ಞಾನ-ಸಂಗೇನ ಚಾನಘ ॥ |
|
ಓ ಒಳ್ಳೆಯವನೆ, ಆ ಗುಣತ್ರಯದಲ್ಲಿ ಸತ್ವವು (ಅಭಿಮಾನಿಯಾದ ಶ್ರೀತತ್ವ) ಶುದ್ಧವಾದುದು. ಆದ್ದರಿಂದ ಅದು ಬೆಳಕು ನೀಡುವುದು ಮತ್ತು ದುಃಖ ಕಳೆಯುವುದು. ಸುಖ ಮತ್ತು ಜ್ಞಾನಗಳ ಸಂಬಂಧದಿಂದ ಜೀವನನ್ನು ಹಿಡಿದು ಇಡುವುದು. |
|
7
|
ರಜೋ ರಾಗಾತ್ಮಕಂ ವಿದ್ಧಿ ತೃಷ್ಣಾ-ಸಂಗ-ಸಮುದ್ಭವಮ್ ।
ತನ್ನಿಬಧ್ನಾತಿ ಕೌಂತೇಯ ಕರ್ಮ-ಸಂಗೇನ ದೇಹಿನಮ್ ॥ |
|
ಓ ಕೌಂತೇಯನೆ, ರಜೋಗುಣವು (ಅಭಿಮಾನಿಯಾದ ಭೂತತ್ವ) ರಂಜಿಸುವ ಸ್ವರೂಪದ್ದು, ಆಸಕ್ತಿಗಳನ್ನು ಹುಟ್ಟಿಸುವುದು ಎಂದು ತಿಳಿ. ಅದು ಜೀವನನ್ನು ಕರ್ಮದ ಸಂಬಂಧದಿಂದ ಕಟ್ಟಿಹಾಕುತ್ತದೆ. |
|
8
|
ತಮಸ್ತ್ವಜ್ಞಾನ-ಜಂ ವಿದ್ಧಿ ಮೋಹನಂ ಸರ್ವ-ದೇಹಿನಾಮ್ ।
ಪ್ರಮಾದಾಲಸ್ಯ-ನಿದ್ರಾಭಿಃ ತನ್ನಿಬಧ್ನಾತಿ ಭಾರತ ॥ |
|
ಓ ಭಾರತನೆ, ತಮೋಗುಣವು (ಅಭಿಮಾನಿಯಾದ ದರ್ಗಾತತ್ವ) ಎಲ್ಲ ಜೀವಿಗಳಿಗೆ ಅಜ್ಞಾನವನ್ನು ಹುಟ್ಟಿಸುವುದು, ಭ್ರಮೆಗೊಳಿಸುವುದು ಎಂದು ತಿಳಿ. ಅದು ತಪ್ಪು, ಸೋಮಾರಿತನ ಮತ್ತು ನಿದ್ದೆಗಳಿಂದ ಜೀವನನ್ನು ಕಟ್ಟಿಹಾಕುತ್ತದೆ. |
|
9
|
ಸತ್ವಂ ಸುಖೇ ಸಂಜಯತಿ ರಜಃ ಕರ್ಮಣಿ ಭಾರತ ।
ಜ್ಞಾನಮಾವೃತ್ಯ ತು ತಮಃ ಪ್ರಮಾದೇ ಸಂಜಯತ್ಯುತ ॥ |
|
ಓ ಭಾರತನೆ, ಸತ್ವವು ಸುಖದಲ್ಲಿ, ರಜಸ್ಸು ಕರ್ಮದಲ್ಲಿ ಮತ್ತು ತಮಸ್ಸು ಜ್ಞಾನವನ್ನು ಮುಚ್ಚಿ ತಪ್ಪಿನಲ್ಲಿ ಆಸಕ್ತಿಯನ್ನು ಕೊಡುತ್ತದೆ. |
|
10
|
ರಜಸ್ತಮಶ್ಚಾಭಿ-ಭೂಯ ಸತ್ವಂ ಭವತಿ ಭಾರತ ।
ರಜಃ ಸತ್ವಂ ತಮಶ್ಚೈವ ತಮಃ ಸತ್ವಂ ರಜಸ್ತಥಾ ॥ |
|
ಓ ಭಾರತನೆ, ರಜಸ್ಸನ್ನು ಮತ್ತು ತಮಸ್ಸನ್ನು ಕಡಿಮೆ ಮಾಡಿ ಸತ್ವವು ಬೆಳೆಯುತ್ತದೆ. ಹೀಗೆ ಸತ್ವವನ್ನು ಮತ್ತು ತಮಸ್ಸನ್ನು ನಿಗ್ರಹಿಸಿ ರಜೋಗುಣ ವೃದ್ಧಿಸುತ್ತದೆ. ಹಾಗೆಯೆ ಸತ್ವವನ್ನು ಮತ್ತು ರಜಸ್ಸನ್ನು ಹಿಂದೆ ಹಾಕಿ ತಮಸ್ಸು ಹೆಚ್ಚಾಗುತ್ತದೆ. |
|
11
|
ಸರ್ವ-ದ್ವಾರೇಷು ದೇಹೇಽಸ್ಮಿನ್ ಪ್ರಕಾಶ ಉಪ-ಜಾಯತೇ ।
ಜ್ಞಾನಂ ಯದಾ ತದಾ ವಿದ್ಯಾತ್ ವಿವೃದ್ಧಂ ಸತ್ವಮಿತ್ಯುತ ॥ |
|
ಈ ದೇಹದಲ್ಲಿ ಎಲ್ಲ ಇಂದ್ರಿಯಗಳಲ್ಲೂ ಜ್ಞಾನದ ಬೆಳಕು ಹುಟ್ಟಿದರೆ ಸತ್ವಗುಣ ಹೆಚ್ಚಿದೆ ಎಂದು ತಿಳಿಯಬೇಕು. |
|
12
|
ಲೋಭಃ ಪ್ರವೃತ್ತಿರಾರಂಭಃ ಕರ್ಮಣಾಮಶಮಃ ಸ್ಪೃಹಾ ।
ರಜಸ್ಯೇತಾನಿ ಜಾಯಂತೇ ವಿವೃದ್ಧೇ ಭರತರ್ಷಭ ॥ |
|
ಓ ಭರತಶ್ರೇಷ್ಠನೆ, ಜಿಪುಣತನ, ಹೆಚ್ಚು ದುಡಿಮೆ, ಬಹಳ ಕೆಲಸಗಳನ್ನು ಆರಂಭಿಸುವುದು, ಅಶಾಂತಿ, ಅತ್ಯಾಸೆ ಇವುಗಳು ರಜೋಗುಣ ಹೆಚ್ಚಿದಾಗ ಹುಟ್ಟುತ್ತವೆ. |
|
13
|
ಅಪ್ರಕಾಶೋಽಪ್ರವೃತ್ತಿಶ್ಚ ಪ್ರಮಾದೋ ಮೋಹ ಏವ ಚ ।
ತಮಸ್ಯೇತಾನಿ ಜಾಯಂತೇ ವಿವೃದ್ಧೇ ಕುರು-ನಂದನ ॥ |
|
ಓ ಕುರುನಂದನನೆ, ಅಜ್ಞಾನ, ಕಡಿಮೆ ದುಡಿಮೆ, ತಪ್ಪು, ಭ್ರಮೆ ಇವುಗಳು ತಮೋಗುಣ ಹೆಚ್ಚಾದಾಗ ಹೆಚ್ಚುತ್ತವೆ. |
|
14
|
ಯದಾ ಸತ್ವೇ ಪ್ರವೃದ್ಧೇ ತು ಪ್ರಳಯಂ ಯಾತಿ ದೇಹ-ಭೃತ್ ।
ತದೋತ್ತಮ-ವಿದಾಂ ಲೋಕಾನ್ ಅಮಲಾನ್ ಪ್ರತಿಪದ್ಯತೇ ॥ |
|
ಸತ್ವ ಹೆಚ್ಚಾದಾಗ ಜೀವಿ ಸತ್ತುಹೋದರೆ, ಮತ್ತೆ ದೇವನನ್ನು ತಿಳಿದವರ ನಡುವೆ ಜ್ಞಾನಯೋಗ್ಯಗಳಾದ ದೇಹಗಳನ್ನು ಪಡೆದು ಹುಟ್ಟುತ್ತಾನೆ. |
|
15
|
ರಜಸಿ ಪ್ರಳಯಂ ಗತ್ವಾ ಕರ್ಮ-ಸಂಗಿಷು ಜಾಯತೇ ।
ತಥಾ ಪ್ರಲೀನಸ್ತಮಸಿ ಮೂಢ-ಯೋನಿಷು ಜಾಯತೇ ॥ |
|
ರಜೋಗುಣ ಹೆಚ್ಚಿದ್ದಾಗ ಸತ್ತರೆ, ಕರ್ಮಗಳಲ್ಲಿ ಆಸಕ್ತರಾದವರ ನಡುವೆ ಹುಟ್ಟುತ್ತಾನೆ. ತಮಸ್ಸು ಹೆಚ್ಚಿದ್ದಾಗ ಸತ್ತರೆ, ಜ್ಞಾನವಿಲ್ಲದ ಜಾತಿಗಳಲ್ಲಿ ಹುಟ್ಟುತ್ತಾನೆ. |
|
16
|
ಕರ್ಮಣಃ ಸುಕೃತಸ್ಯಾಹುಃ ಸಾತ್ವಿಕಂ ನಿರ್ಮಲಂ ಫಲಮ್ ।
ರಜಸಸ್ತು ಫಲಂ ದುಃಖಂ ಅಜ್ಞಾನಂ ತಮಸಃ ಫಲಮ್ ॥ |
|
ಶುದ್ಧವಾದ ಸಾತ್ವಿಕ ಫಲವನ್ನು ಒಳ್ಳೆಯ ಕೆಲಸಕ್ಕೆ ಹೇಳುತ್ತಾರೆ. ರಾಜಸ ಕೆಲಸಕ್ಕೆ ಫಲ ದುಃಖದೊಡನೆ ಸುಖ. ತಾಮಸ ಕೆಲಸದ ಫಲ ಅಜ್ಞಾನ. |
|
17
|
ಸತ್ವಾತ್ ಸಂಜಾಯತೇ ಜ್ಞಾನಂ ರಜಸೋ ಲೋಭ ಏವ ಚ ।
ಪ್ರಮಾದ-ಮೋಹೌ ತಮಸೋ ಭವತೋಽಜ್ಞಾನಮೇವ ಚ ॥ |
|
ಸತ್ವಗುಣದಿಂದ ಜ್ಞಾನ ಹೆಚ್ಚುತ್ತದೆ. ರಜಸ್ಸಿನಿಂದ ಜಿಪುಣತನ ಬೆಳೆಯುವುದು. ತಮಸ್ಸಿನಿಂದ ತಪ್ಪು, ಭ್ರಮೆ ಮತ್ತು ಅಜ್ಞಾನವು ಉಂಟಾಗುತ್ತದೆ. |
|
18
|
ಊರ್ಧ್ವಂ ಗಚ್ಛಂತಿ ಸತ್ವ-ಸ್ಥಾಃ ಮಧ್ಯೇ ತಿಷ್ಠಂತಿ ರಾಜಸಾಃ ।
ಜಘನ್ಯ-ಗುಣ-ವೃತ್ತಿ-ಸ್ಥಾಃ ಅಧೋ ಗಚ್ಛಂತಿ ತಾಮಸಾಃ ॥ |
|
ಸತ್ವದಲ್ಲೆ ಇರುವವರು ಎತ್ತರಕ್ಕೆ ಏರುತ್ತಾರೆ. ರಾಜಸರು ನಡುವೆ ನಿಲ್ಲುತ್ತಾರೆ. ಕೊನೆಯ ಗುಣದ ಸುತ್ತ ಇರುವ ತಾಮಸರು ಕೆಳಗೆ ಹೋಗುತ್ತಾರೆ. |
|
19
|
ನಾನ್ಯಂ ಗುಣೇಭ್ಯಃ ಕರ್ತಾರಂ ಯದಾ ದ್ರಷ್ಟಾಽನು-ಪಶ್ಯತಿ ।
ಗುಣೇಭ್ಯಶ್ಚ ಪರಂ ವೇತ್ತಿ ಮದ್ಭಾವಂ ಸೋಽಧಿಗಚ್ಛತಿ ॥ |
|
ಜ್ಞಾನಿಯು, ತ್ರಿಗುಣಗಳಿಗಿಂತ ಬೇರೆ ಕರ್ತೃ (ಕಾರಣ) ಇಲ್ಲ ಎಂದು ತಿಳಿದಾಗ ತ್ರಿಗುಣಗಳಿಲ್ಲದ ದೇವನನ್ನು ತಿಳಿಯುತ್ತಾನೆ. ಅವನು, ನನ್ನ ಭಕ್ತಿಯನ್ನು ಹೆಚ್ಚು ಗಳಿಸುತ್ತಾನೆ. |
|
20
|
ಗುಣಾನೇತಾನತೀತ್ಯ ತ್ರೀನ್ ದೇಹೀ ದೇಹ-ಸಮುದ್ಭವಾನ್ ।
ಜನ್ಮ-ಮೃತ್ಯು-ಜರಾ-ದುಃಖೈಃ ವಿಮುಕ್ತೋಽಮೃತಮಶ್ನುತೇ ॥ |
|
ದೇಹದಲ್ಲಿ ಉಂಟಾಗುವ ಈ ಮೂರು ಗುಣಗಳನ್ನು ಜೀವನು ದಾಟಿದಾಗ ಹುಟ್ಟು, ಸಾವು, ಮುಪ್ಪು, ದುಃಖಗಳಿಂದ ಬಿಡುಗಡೆ ಹೊಂದಿ ಮುಕ್ತಿಯನ್ನು ಹೊಂದುತ್ತಾನೆ. |
|
ಅರ್ಜುನ
ಉವಾಚ
|
|
21
|
ಕೈರ್ಲಿಂಗೈಸ್ತ್ರೀನ್ ಗುಣಾನೇತಾನ್ ಅತೀತೋ ಭವತಿ ಪ್ರಭೋ ।
ಕಿಮಾಚಾರಃ ಕಥಂ ಚೈತಾನ್ ತ್ರೀನ್ ಗುಣಾನತಿ-ವರ್ತತೇ ॥ |
|
ಅರ್ಜುನನು ಕೇಳಿದನು - ಓ ಸ್ವಾಮಿಯೆ, ಈ ಮೂರು ಗುಣಗಳನ್ನು ದಾಟಿದವನು ಯಾವ ಲಕ್ಷಣಗಳಿಂದ ತಿಳಿಯುತ್ತಾನೆ? ಅವನ ನಡೆ ಎಂಥದು? ಮತ್ತು ಈ ಮೂರು ಗುಣಗಳನ್ನು ಹೇಗೆ ದಾಟುತ್ತಾನೆ? |
|
ಭಗವಾನ್
ಉವಾಚ
|
|
22
|
ಪ್ರಕಾಶಂ ಚ ಪ್ರವೃತ್ತಿಂ ಚ ಮೋಹಮೇವ ಚ ಪಾಂಡವ ।
ನ ದ್ವೇಷ್ಟಿ ಸಂಪ್ರವೃತ್ತಾನಿ ನ ನಿವೃತ್ತಾನಿ ಕಾಂಕ್ಷತಿ ॥ |
|
ಕೃಷ್ಣನು ಹೇಳುತ್ತಾನೆ - ಓ ಪಾಂಡವನೆ, ಬೆಳಕು, ಹೆಚ್ಚು ದುಡಿಮೆ, ಭ್ರಮೆ - ಇವು ಬಂದಾಗ ವಿರೋಧಿಸುವುದಿಲ್ಲ, ಹೋದಾಗ ಬಯಸುವುದೂ ಇಲ್ಲ. |
|
23
|
ಉದಾಸೀನವದಾಸೀನೋ ಗುಣೈರ್ಯೋ ನ ವಿಚಾಲ್ಯತೇ ।
ಗುಣಾ ವರ್ತಂತ ಇತ್ಯೇವ ಯೋಽವ-ತಿಷ್ಠತಿ ನೇಂಗತೇ ॥ |
|
ತ್ರಿಗುಣಗಳಿಂದ ಚಂಚಲನಾಗದೆ, ಗುಣಗಳು ಇರುತ್ತವೆ ಎಂದೆ ಚೆನ್ನಾಗಿ ತಿಳಿಯುತ್ತ ಉದಾಸೀನನಂತೆ ಇರುತ್ತಾನೆ. ವಿಚಲಿತನಾಗನು. |
|
24
|
ಸಮ-ದುಃಖ-ಸುಖಃ ಸ್ವಸ್ಥಃ ಸಮ-ಲೋಷ್ಟಾಶ್ಮ-ಕಾಂಚನಃ ।
ತುಲ್ಯ-ಪ್ರಿಯಾಪ್ರಿಯೋ ಧೀರಃ ತುಲ್ಯ-ನಿಂದಾತ್ಮ-ಸಂಸ್ತುತಿಃ ॥ |
|
ಗಟ್ಟಿಮನಸ್ಸುಳ್ಳವನಾಗಿ ನೋವು-ನಲಿವುಗಳನ್ನು, ಇಷ್ಟ-ಅನಿಷ್ಟಗಳನ್ನು, ತೆಗಳಿಕೆ-ಹೊಗಳಿಕೆಗಳನ್ನು ಒಂದೇ ತರ ಸ್ವೀಕರಿಸುವವನು, ತನ್ನ ಪಾಡಿಗೆ ತಾನಿರುವವನು, ಮಣ್ಣು-ಕಲ್ಲು-ಚಿನ್ನಗಳನ್ನೂ ಒಂದೇ ತರ ಕಾಣುವವನು. |
|
25
|
ಮಾನಾಪ-ಮಾನಯೋಸ್ತುಲ್ಯಃ ತುಲ್ಯೋ ಮಿತ್ರಾರಿ-ಪಕ್ಷಯೋಃ ।
ಸರ್ವಾರಂಭ-ಪರಿತ್ಯಾಗೀ ಗುಣಾತೀತಃ ಸ ಉಚ್ಯತೇ ॥ |
|
ಗೌರವ ತಿರಸ್ಕಾರಗಳಲ್ಲಿಯೂ ಸಮನು. ಗೆಳೆಯರಲ್ಲಿ ವೈರಿಗಳಲ್ಲಿಯೂ ಒಂದೇ ತರನು. ಲೋಕದ ಎಲ್ಲ ಕೆಲಸವನ್ನೂ ಬಿಟ್ಟವನು. ತ್ರಿಗುಣಗಳನ್ನು ದಾಟಿದವನು ಎನಿಸುತ್ತಾನೆ. |
|
26
|
ಮಾಂ ಚ ಯೋಽವ್ಯಭಿಚಾರೇಣ ಭಕ್ತಿ-ಯೋಗೇನ ಸೇವತೇ ।
ಸ ಗುಣಾನ್ ಸಮತೀತ್ಯೈತಾನ್ ಬ್ರಹ್ಮ-ಭೂಯಾಯ ಕಲ್ಪತೇ ॥ |
|
ನನ್ನನ್ನೇ ಪರಿಪೂರ್ಣವಾದ ಭಕ್ತಿಯಿಂದ ಆರಾಧಿಸುವವನು ಈ ತ್ರಿಗುಣಗಳನ್ನು ಪೂರ್ತಿ ದಾಟಿ ಪೂರ್ಣ(ಮುಕ್ತ)ನಾಗಲು ಸಮರ್ಥನಾಗುತ್ತಾನೆ. |
|
27
|
ಬ್ರಹ್ಮಣೋ ಹಿ ಪ್ರತಿಷ್ಠಾಽಹಂ ಅಮೃತಸ್ಯಾವ್ಯಯಸ್ಯ ಚ ।
ಶಾಶ್ವತಸ್ಯ ಚ ಧರ್ಮಸ್ಯ ಸುಖಸ್ಯೈಕಾಂತಿಕಸ್ಯ ಚ ॥ |
|
ನಾಶವಿಲ್ಲದ ವಿಕಾರ ಹೊಂದದ ಚಿತ್ಪ್ರಕೃತಿಗೂ ನಾನೇ ಆಶ್ರಯ. ಸನಾತನ ಧರ್ಮಕ್ಕೆ ಮತ್ತು ಕೇವಲ ಸುಖರೂಪದ ಮೋಕ್ಷಕ್ಕೆ ನಾನೇ ಆಶ್ರಯ. |