|
ಅರ್ಜುನ
ಉವಾಚ
|
|
1
|
ಯೇ ಶಾಸ್ತ್ರ-ವಿಧಿಮುತ್ಸೃಜ್ಯ ಯಜಂತೇ ಶ್ರದ್ಧಯಾಽನ್ವಿತಾಃ ।
ತೇಷಾಂ ನಿಷ್ಠಾ ತು ಕಾ ಕೃಷ್ಣ ಸತ್ತ್ವಮಾಹೋ ರಜಸ್ತಮಃ ॥ |
|
ಅರ್ಜುನನು ಕೇಳಿದನು - ಓ ಕೃಷ್ಣನೆ, ಕೆಲವರು ನಂಬಿಕೆ ಉಳ್ಳವರು ಶಾಸ್ತ್ರದ ನಿಯಮವನ್ನು ಬಿಟ್ಟು ಪೂಜಿಸುತ್ತಾರೆ. ಅಂಥವರ ನೆಲೆ ಎಂಥದು? ಸತ್ವವೆ? ರಜಸ್ಸೇ? ಅಥವಾ ತಮಸ್ಸೇ? |
|
ಭಗವಾನ್
ಉವಾಚ
|
|
2
|
ತ್ರಿ-ವಿಧಾ ಭವತಿ ಶ್ರದ್ಧಾ ದೇಹಿನಾಂ ಸಾ ಸ್ವ-ಭಾವ-ಜಾ ।
ಸಾತ್ತ್ವಿಕೀ ರಾಜಸೀ ಚೈವ ತಾಮಸೀ ಚೇತಿ ತಾಂ ಶೃಣು ॥ |
|
ಕೃಷ್ಣನು ಹೇಳಿದನು - ಜೀವಿಗಳಿಗೆ ತಮ್ಮತನದಿಂದಲೆ ಹುಟ್ಟಿಬಂದ ನಂಬಿಕೆಯು ಸಾತ್ವಿಕ ರಾಜಸ ಮತ್ತು ತಾಮಸ ಎಂಬ ಮೂರು ಬಗೆಯದ್ದು ಆಗಿದೆ. ಆ ನಂಬಿಕೆಯ ಬಗ್ಗೆ ಕೇಳು. |
|
3
|
ಸತ್ವಾನುರೂಪಾ ಸರ್ವಸ್ಯ ಶ್ರದ್ಧಾ ಭವತಿ ಭಾರತ ।
ಶ್ರದ್ಧಾ-ಮಯೋಽಯಂ ಪುರುಷೋ ಯೋ ಯಚ್ಛ್ರದ್ಧಃ ಸ ಏವ ಸಃ ॥ |
|
ಓ ಭಾರತನೆ, ಎಲ್ಲರ ಶ್ರದ್ಧೆಯೂ ಅವರ ಸ್ವಭಾವಕ್ಕೆ ಅನುಗುಣವಾಗಿಯೆ ಇರುತ್ತದೆ. ಈ ಜೀವನು ಶ್ರದ್ಧೆಯ ರೂಪನು. ಶ್ರದ್ಧೆ ಯಾವ ರೀತಿಯದ್ದೋ ಅವನು ಅಂಥವನು. |
|
4
|
ಯಜಂತೇ ಸಾತ್ತ್ವಿಕಾ ದೇವಾನ್ ಯಕ್ಷ-ರಕ್ಷಾಂಸಿ ರಾಜಸಾಃ ।
ಪ್ರೇತಾನ್ ಭೂತ-ಗಣಾಂಶ್ಚಾನ್ಯೇ ಯಜಂತೇ ತಾಮಸಾ ಜನಾಃ ॥ |
|
ಸಾತ್ವಿಕರು ದೇವತೆಗಳನ್ನು ಪೂಜಿಸುತ್ತಾರೆ. ಮತ್ತೆ ರಾಜಸರು ಯಕ್ಷ-ರಾಕ್ಷಸರನ್ನು ಪೂಜಿಸುತ್ತಾರೆ. ಇತರರು ತಾಮಸ ಶ್ರದ್ಧೆಯವರು ಪ್ರೇತಗಳನ್ನು ಹಾಗೆಯೇ ಭೂತಗಡಣಗಳನ್ನು ಪೂಜಿಸುತ್ತಾರೆ. |
|
5
|
ಅಶಾಸ್ತ್ರ-ವಿಹಿತಂ ಘೋರಂ ತಪ್ಯಂತೇ ಯೇ ತಪೋ ಜನಾಃ ।
ಡಂಭಾಹಂಕಾರ-ಸಂಯುಕ್ತಾಃ ಕಾಮ-ರಾಗ-ಬಲಾನ್ವಿತಾಃ ॥ |
|
6
|
ಕರ್ಶಯಂತಃ ಶರೀರ-ಸ್ಥಂ ಭೂತ-ಗ್ರಾಮಮಚೇತಸಃ ।
ಮಾಂ ಚೈವಾಂತಃ-ಶರೀರ-ಸ್ಥಂ ತಾನ್ ವಿಧ್ಯಾಸುರ-ನಿಶ್ಚಯಾನ್ ॥ |
|
ಬೂಟಾಟಿಕೆ ಮತ್ತು ಗರ್ವವುಳ್ಳ ಕೆಲವು ಜನರು ಆಸೆ-ಆಕಾಂಕ್ಷೆಗಳ ಬಲದೊಂದಿಗೆ ದೇಹವನ್ನು ದುಡಿಸುವ ದೇವತೆಗಳ ಸಮೂಹವನ್ನು ಮತ್ತು ದೇಹದೊಳಗಿರುವ ನನ್ನನ್ನೂ ಲೆಕ್ಕಿಸದೆ ಶಾಸ್ತ್ರ ಹೇಳದ ಹಾಳು ತಪಸ್ಸನ್ನು ಆಚರಿಸುವರು, ಆ ಅವಿವೇಕಿಗಳನ್ನು ಅಸುರಸ್ವಭಾವದವರೆಂದು ತಿಳಿ. |
|
7
|
ಆಹಾರಸ್ತ್ವಪಿ ಸರ್ವಸ್ಯ ತ್ರಿ-ವಿಧೋ ಭವತಿ ಪ್ರಿಯಃ ।
ಯಜ್ಞಸ್ತಪಸ್ತಥಾ ದಾನಂ ತೇಷಾಂ ಭೇದಮಿಮಂ ಶೃಣು ॥ |
|
ಎಲ್ಲರ ಆಹಾರವೂ ಮೂರು ಬಗೆಯಾಗಿ ಇಷ್ಟ ಆಗುತ್ತದೆ. ಎಲ್ಲರ ಯಜ್ಞ, ತಪಸ್, ದಾನಗಳೂ ಮೂರು ವಿಧದಲ್ಲಿ ಪ್ರಿಯವಾಗಿವೆ. ಅವುಗಳ ಈ ವ್ಯತ್ಯಾಸವನ್ನು ಕೇಳು. |
|
8
|
ಆಯುಸ್ಸತ್ತ್ವ-ಬಲಾರೋಗ್ಯ-ಸುಖ-ಪ್ರೀತಿ-ವಿವರ್ಧನಾಃ ।
ರಸ್ಯಾಃ ಸ್ನಿಗ್ಧಾಃ ಸ್ಥಿರಾ ಹೃದ್ಯಾಃ ಆಹಾರಾಃ ಸಾತ್ತ್ವಿಕ-ಪ್ರಿಯಾಃ ॥ |
|
ಆಯುಷ್ಯ, ಮನೋಬಲ, ದೇಹಬಲ, ಆರೋಗ್ಯ, ಸುಖ ಮತ್ತು ಪ್ರೀತಿಗಳನ್ನು ಹೆಚ್ಚಿಸುವ ಆಹಾರಗಳು, ರುಚಿಯಾದ, ಪಸೆಯುಳ್ಳ, ಬಹಳ ಕಾಲ ಪರಿಣಾಮ ಕೊಡುವ, ಮನೋಹರವಾದ ಆಹಾರಗಳೂ ಸಾತ್ವಿಕರಿಗೆ ಇಷ್ಟವಾದವುಗಳು. |
|
9
|
ಕಟ್ವಮ್ಲ-ಲವಣಾತ್ಯುಷ್ಣ-ತೀಕ್ಷ್ಣ-ರೂಕ್ಷ-ವಿದಾಹಿನಃ ।
ಆಹಾರಾ ರಾಜಸಸ್ಯೇಷ್ಟಾಃ ದುಃಖ-ಶೋಕಾಮಯ-ಪ್ರದಾಃ ॥ |
|
ಹೆಚ್ಚಿನ ಖಾರ, ಹುಳಿ, ಉಪ್ಪು, ಬಿಸಿ, ಕಟ್ಟಗೆ, ರಸಹೀನ (ಒಣ) ಮತ್ತು ಶೀತ ತಿನಿಸುಗಳು (ದೇಹಕ್ಕೆ) ದುಃಖ, (ಮನಸ್ಸಿಗೆ) ಸಂಕಟ ಮತ್ತು ರೋಗಗಳನ್ನು ತರುವ ತಿನಿಸುಗಳೂ ರಾಜಸರಿಗೆ ಪ್ರಿಯವಾದವುಗಳು. |
|
10
|
ಯಾತ-ಯಾಮಂ ಗತ-ರಸಂ ಪೂತಿ ಪರ್ಯುಷಿತಂ ಚ ಯತ್ ।
ಉಚ್ಛಿಷ್ಟಮಪಿ ಚಾಮೇಧ್ಯಂ ಭೋಜನಂ ತಾಮಸ-ಪ್ರಿಯಮ್ ॥ |
|
ಹೊತ್ತು ಮೀರಿದ್ದು, ರುಚಿ ಇಲ್ಲದ್ದು, ಹಳಸಿದ್ದು, ಕೊಳಕಾದದ್ದು, ತಂಗಳು ಮತ್ತು ಎಂಜಲು ಇವು ತಾಮಸರಿಗೆ ಪ್ರಿಯವಾದ ಊಟ. |
|
11
|
ಅಫಲಾಕಾಂಕ್ಷಿಭಿರ್ಯಜ್ಞೋ ವಿಧಿ-ದೃಷ್ಟೋ ಯ ಇಜ್ಯತೇ ।
ಯಷ್ಟವ್ಯಮೇವೇತಿ ಮನಃ ಸಮಾಧಾಯ ಸ ಸಾತ್ತ್ವಿಕಃ ॥ |
|
ಫಲದ ಆಸೆ ಇಲ್ಲದೆ, ಶಾಸ್ತ್ರ ಹೇಳಿದಂತೆ, ಕರ್ತವ್ಯ ಎಂಬ ನೆಲೆಯಲ್ಲಿ ಇಷ್ಟವಾದ ಮನಸ್ಸಿನಿಂದ ಮಾಡಿದ ಯಜ್ಞ ಸಾತ್ವಿಕ. |
|
12
|
ಅಭಿ-ಸಂಧಾಯ ತು ಫಲಂ ಡಂಭಾರ್ಥಮಪಿ ಚೈವ ಯತ್ ।
ಇಜ್ಯತೇ ಭರತ-ಶ್ರೇಷ್ಠ ತಂ ಯಜ್ಞಂ ವಿದ್ಧಿ ರಾಜಸಮ್ ॥ |
|
ಫಲದ ಆಸೆಯಿಂದ ಮಾಡಿದ ಯಜ್ಞ ರಾಜಸ. ಓ ಭರತಶ್ರೇಷ್ಠನೆ, ತೋರಿಕೆಗಾಗಿ ಮಾಡಿದ ಯಜ್ಞವನ್ನೂ ರಾಜಸವೆಂದೆ ತಿಳಿ. |
|
13
|
ವಿಧಿ-ಹೀನಮಸೃಷ್ಟಾನ್ನಂ ಮಂತ್ರ-ಹೀನಮದಕ್ಷಿಣಮ್ ।
ಶ್ರದ್ಧಾ-ವಿರಹಿತಂ ಯಜ್ಞಂ ತಾಮಸಂ ಪರಿ-ಚಕ್ಷತೇ ॥ |
|
ಶಾಸ್ತ್ರನಿಯಮ ಬಿಟ್ಟು ಮಾಡಿದ ಯಜ್ಞವನ್ನು ತಾಮಸ ಎನ್ನುವರು. ಅನ್ನದಾನ, ಮಂತ್ರ, ದಕ್ಷಿಣೆ, ದೇವನಲ್ಲಿ ನಂಬಿಕೆ ಯಾವುದೊಂದೂ ಇಲ್ಲದೆ ಮಾಡಿದ ಯಜ್ಞವೂ ತಾಮಸ. |
|
14
|
ದೇವ-ದ್ವಿಜ-ಗುರು-ಪ್ರಾಜ್ಞ-ಪೂಜನಂ ಶೌಚಮಾರ್ಜವಮ್ ।
ಬ್ರಹ್ಮ-ಚರ್ಯಮಹಿಂಸಾ ಚ ಶಾರೀರಂ ತಪ ಉಚ್ಯತೇ ॥ |
|
ವೇದಶಾಸ್ತ್ರದ ದೇವತೆಗಳು, ಅಧ್ಯಯನಯೋಗ್ಯರು, ಅಧ್ಯಾಪಕರು, ವೇದಾರ್ಥ ತಿಳಿದವರು ಇವರನ್ನು ಗೌರವಿಸುವುದು, ತೀರ್ಥಗಳಲ್ಲಿ ಮುಳುಗಿ ಮೀಯುವುದು, ನೇರ ನಡೆ, ಬ್ರಹ್ಮಚರ್ಯ ಮತ್ತು ಯಾರಿಗೂ ಹೊಡೆಯದಿರುವುದು ಶರೀರದ ತಪಸ್ಸು ಎನಿಸುತ್ತದೆ. |
|
15
|
ಅನುದ್ವೇಗ-ಕರಂ ವಾಕ್ಯಂ ಸತ್ಯಂ ಪ್ರಿಯ-ಹಿತಂ ಚ ಯತ್ ।
ಸ್ವಾಧ್ಯಾಯಾಭ್ಯಸನಂ ಚೈವ ವಾಙ್ಮಯಂ ತಪ ಉಚ್ಯತೇ ॥ |
|
ಕೆರಳಿಸದ, ಸತ್ಯವಾದ (ಸುಳ್ಳಿರದ), ಕೇಳಲು ಇಷ್ಟವಾದ, ಹಾಗೆಯೆ ಒಳ್ಳೆಯದು ಮಾಡುವ ಮಾತು ಮತ್ತು ಶಾಸ್ತ್ರಗಳ ಕಲಿಕೆಯೂ ಮಾತಿನ ತಪಸ್ಸು ಎನಿಸುತ್ತದೆ. |
|
16
|
ಮನಃ-ಪ್ರಸಾದಃ ಸೌಮ್ಯತ್ವಂ ಮೌನಮಾತ್ಮ-ವಿನಿಗ್ರಹಃ ।
ಭಾವ-ಸಂಶುದ್ಧಿರಿತ್ಯೇತತ್ ತಪೋ ಮಾನಸಮುಚ್ಯತೇ ॥ |
|
ಕೋಪಿಸದಿರುವುದು, ಮೃದುತನ, ಮನನ, ತನ್ನ ಮೇಲೆ ಹಿಡಿತ ಮತ್ತು ಒಳ್ಳೆಯ ಅಭಿಪ್ರಾಯ - ಇವು ಮನದ ತಪಸ್ಸು ಎನಿಸುತ್ತವೆ. |
|
17
|
ಶ್ರದ್ಧಯಾ ಪರಯಾ ತಪ್ತಂ ತಪಸ್ತತ್ ತ್ರಿ-ವಿಧಂ ನರೈಃ ।
ಅಫಲಾಕಾಂಕ್ಷಿಭಿರ್ಯುಕ್ತೈಃ ಸಾತ್ತ್ವಿಕಂ ಪರಿ-ಚಕ್ಷತೇ ॥ |
|
ಈ ಮೂರೂ ಬಗೆಯ ತಪಸ್ಸು, ಫಲದ ಆಸೆ ತೊರೆದ ಮನುಜರಿಂದ ಪೂರ್ತಿ ನಂಬಿಕೆಯಿಂದ ದೇವರಿಗಾಗಿ ನಡೆಸಲ್ಪಟ್ಟರೆ ಅದನ್ನು ಸಾತ್ವಿಕ ತಪಸ್ಸು ಎನ್ನುತ್ತಾರೆ. |
|
18
|
ಸತ್ಕಾರ-ಮಾನ-ಪೂಜಾರ್ಥಂ ತಪೋ ಡಂಭೇನ ಚೈವ ಯತ್ ।
ಕ್ರಿಯತೇ ತದಿಹ ಪ್ರೋಕ್ತಂ ರಾಜಸಂ ಚಲಮಧ್ರುವಮ್ ॥ |
|
ಇಲ್ಲಿ ಸಾಧು ಎನಿಸಲು, ಸಂಮಾನ ಪಡೆಯಲು, ಗೌರವಕ್ಕಾಗಿ ಬೂಟಾಟಿಕೆಯಿಂದ ಮಾಡುವ ಚಂಚಲವಾದ, ಶಾಶ್ವತವಲ್ಲದ ಆ ತಪಸ್ಸು ರಾಜಸ ಎನಿಸಿದೆ. |
|
19
|
ಮೂಢ-ಗ್ರಾಹೇಣಾಽತ್ಮನೋ ಯತ್ ಪೀಡಯಾ ಕ್ರಿಯತೇ ತಪಃ ।
ಪರಸ್ಯೋತ್ಸಾದನಾರ್ಥಂ ವಾ ತತ್ತಾಮಸಮುದಾಹೃತಮ್ ॥ |
|
ಶಾಸ್ತ್ರದ ಮಾತನ್ನು ತಪ್ಪಾಗಿ ತಿಳಿದಿದ್ದರಿಂದ ತನ್ನನ್ನೆ ಹಿಂಸಿಸುವ ಮೂಲಕ ಮಾಡಿದ ತಪಸ್ಸು ತಾಮಸ ಎನಿಸಿದೆ ಅಥವಾ ಪರನ ಪೀಡೆಗಾಗಿ ಮಾಡಿದ್ದೂ ತಾಮಸವೆ. |
|
20
|
ದಾತವ್ಯಮಿತಿ ಯದ್ದಾನಂ ದೀಯತೇಽನುಪ-ಕಾರಿಣೇ ।
ದೇಶೇ ಕಾಲೇ ಚ ಪಾತ್ರೇ ಚ ತದ್ದಾನಂ ಸಾತ್ತ್ವಿಕಂ ಸ್ಮೃತಮ್ ॥ |
|
ಪ್ರತ್ಯುಪಕಾರಕ್ಕಾಗಿ ಅಲ್ಲದೆ, ಕರ್ತವ್ಯ ಎಂದು ಕೊಡುವ ದಾನವು, ಪುಣ್ಯದೇಶದಲ್ಲಿ ಪ್ರಶಸ್ತಕಾಲದಲ್ಲಿ ಯೋಗ್ಯವ್ಯಕ್ತಿಗೆ ನೀಡಲ್ಪಟ್ಟಾಗ ಅದು ಸಾತ್ವಿಕ ದಾನ ಎನಿಸುವುದು. |
|
21
|
ಯತ್ತು ಪ್ರತ್ಯುಪ-ಕಾರಾರ್ಥಂ ಫಲಮುದ್ದಿಶ್ಯ ವಾ ಪುನಃ ।
ದೀಯತೇ ಚ ಪರಿ-ಕ್ಲಿಷ್ಟಂ ತದ್ ರಾಜಸಮುದಾಹೃತಮ್ ॥ |
|
ಪ್ರತ್ಯುಪಕಾರಕ್ಕಾಗಿ ಅಥವಾ ಫಲದ ಆಸೆಯಿಂದ ಒಳಗೆ ಸಂಕಟಪಡುತ್ತ ನೀಡುವ ದಾನ ರಾಜಸ ಎನಿಸಿದೆ. |
|
22
|
ಅದೇಶ-ಕಾಲೇ ಯದ್ದಾನಂ ಅಪಾತ್ರೇಭ್ಯಶ್ಚ ದೀಯತೇ ।
ಅಸತ್ಕೃತಮವ-ಜ್ಞಾತಂ ತತ್ತಾಮಸಮುದಾಹೃತಮ್ ॥ |
|
ಶಾಸ್ತ್ರ ಹೇಳದ ದೇಶ-ಕಾಲಗಳಲ್ಲಿ ಅಯೋಗ್ಯನಿಗೆ, ಗೌರವಿಸದೆ ಅವಹೇಳನೆಯೊಂದಿಗೆ ನೀಡಿದ ದಾನ ತಾಮಸ ಎನಿಸಿದೆ. |
|
23
|
ಓಂ ತತ್ ಸದಿತಿ ನಿರ್ದೇಶೋ ಬ್ರಹ್ಮಣಸ್ತ್ರಿ-ವಿಧಃ ಸ್ಮೃತಃ ।
ಬ್ರಾಹ್ಮಣಾಸ್ತೇನ ವೇದಾಶ್ಚ ಯಜ್ಞಾಶ್ಚ ವಿಹಿತಾಃ ಪುರಾ ॥ |
|
ಓಂ (ಅಂತರ್ಯಾಮಿ) ತತ್ (ವ್ಯಾಪ್ತ) ಸತ್ (ನಿರ್ದೋಷ) ಎಂದು ದೇವನ ಮೂರು ರೀತಿಯ ಹೆಸರುಗಳು ಎನಿಸಿವೆ. ಆ ದೇವನಿಂದಲೆ ಹಿಂದೆ ವೇದಜ್ಞರು ವೇದಗಳು ಮತ್ತು ಯಜ್ಞಗಳು ಆದವು. |
|
24
|
ತಸ್ಮಾದೋಮಿತ್ಯುದಾಹೃತ್ಯ ಯಜ್ಞ-ದಾನ-ತಪಃ-ಕ್ರಿಯಾಃ ।
ಪ್ರವರ್ತಂತೇ ವಿಧಾನೋಕ್ತಾಃ ಸತತಂ ಬ್ರಹ್ಮ-ವಾದಿನಾಮ್ ॥ |
|
ಆದ್ದರಿಂದ ವೇದದಲ್ಲಿ ದೇವನನ್ನು ಚಿಂತಿಸುವ ವೈದಿಕರ ವೇದೋಕ್ತ ಕರ್ಮಗಳು ಯಜ್ಞದಾನತಪಸ್ಸುಗಳು ಯಾವಾಗಲೂ ಓಂ ಎಂದು ದೇವನ ನಾಮಸ್ಮರಣೆಯ ಜತೆಗೆ ಆರಂಭವಾಗುತ್ತವೆ. |
|
25
|
ತದಿತ್ಯನಭಿ-ಸಂಧಾಯ ಫಲಂ ಯಜ್ಞ-ತಪಃ-ಕ್ರಿಯಾಃ ।
ದಾನ-ಕ್ರಿಯಾಶ್ಚ ವಿವಿಧಾಃ ಕ್ರಿಯಂತೇ ಮೋಕ್ಷ-ಕಾಂಕ್ಷಿಭಿಃ ॥ |
|
ಮೋಕ್ಷ ಬಯಸುವವರು, ಫಲವನ್ನು ಬಯಸದೆ ತತ್ ಎಂದು ದೇವನ ನಾಮಸ್ಮರಣೆಯ ಜೊತೆಗೆ ಬಗೆಬಗೆಯ ಯಜ್ಞದಾನತಪಸ್ಸುಗಳನ್ನು ಮಾಡುತ್ತಾರೆ. |
|
26
|
ಸದ್ಭಾವೇ ಸಾಧು-ಭಾವೇ ಚ ಸದಿತ್ಯೇತತ್ ಪ್ರಯುಜ್ಯತೇ ।
ಪ್ರಶಸ್ತೇ ಕರ್ಮಣಿ ತಥಾ ಸಚ್ಛಬ್ದಃ ಪಾರ್ಥ ಯುಜ್ಯತೇ ॥ |
|
ಓ ಪಾರ್ಥನೆ, ಹುಟ್ಟು ಮತ್ತು ಒಳ್ಳೆಯತನ ಎಂಬ ಅರ್ಥದಲ್ಲಿ ಸತ್ ಎಂಬ ಶಬ್ದ ಉಪಯೋಗಿಸಲ್ಪಡುತ್ತದೆ. ಹಾಗೆಯೆ ಒಳ್ಳೆಯ ಕೆಲಸ ಎಂಬ ಅರ್ಥದಲ್ಲಿಯೂ ಸತ್ ಶಬ್ದ ಬಳಸಲ್ಪಡುತ್ತದೆ. |
|
27
|
ಯಜ್ಞೇ ತಪಸಿ ದಾನೇ ಚ ಸ್ಥಿತಿಃ ಸದಿತಿ ಚೋಚ್ಯತೇ ।
ಕರ್ಮ ಚೈವ ತದರ್ಥೀಯಂ ಸದಿತ್ಯೇವಾಭಿ-ಧೀಯತೇ ॥ |
|
ಯಜ್ಞ, ದಾನ, ತಪಸ್ಸುಗಳಲ್ಲಿ ನಿಷ್ಠೆಯು ಸತ್ ಎನಿಸುತ್ತದೆ. ದೇವರಿಗಾಗಿ ನಡೆಸುವ ಕರ್ಮವೂ ಸತ್ ಎಂದೇ ಕರೆಯಲ್ಪಡುತ್ತದೆ. |
|
28
|
ಅಶ್ರದ್ಧಯಾ ಹುತಂ ದತ್ತಂ ತಪಸ್ತಪ್ತಂ ಕೃತಂ ಚ ಯತ್ ।
ಅಸದಿತ್ಯುಚ್ಯತೇ ಪಾರ್ಥ ನ ಚ ತತ್ ಪ್ರೇತ್ಯ ನೋ ಇಹ ॥ |
|
ಓ ಪಾರ್ಥನೆ, ನಂಬಿಕೆ ಇಲ್ಲದೆ (ಅಸಡ್ಡೆಯಿಂದ) ಮಾಡಿದ ಹೋಮ, ದಾನ, ತಪಸ್ಸು ಮತ್ತು ಯಾವುದೇ ಕರ್ಮವು ಅಸತ್ (ಹಾಳು) ಎಂದು ಹೇಳಲ್ಪಡುವುದು. ಆ ಕರ್ಮ ಸತ್ತ ಬಳಿಕವೂ ಫಲ ಕೊಡದು, ಈ ಲೋಕದಲ್ಲಿಯೂ ಫಲ ನೀಡದು. |