ಅಥ ಏಕಾದಶೋಽಧ್ಯಾಯಃ ಅಧ್ಯಾಯ ೧೧

ಅರ್ಜುನ ಉವಾಚ
1 ಮದನುಗ್ರಹಾಯ ಪರಮಂ ಗುಹ್ಯಮಧ್ಯಾತ್ಮ-ಸಂಜ್ಞಿತಮ್ । ಯತ್ ತ್ವಯೋಕ್ತಂ ವಚಸ್ತೇನ ಮೋಹೋಽಯಂ ವಿಗತೋ ಮಮ ॥
ಅರ್ಜುನನು ಹೇಳಿದನು - ನನ್ನನ್ನು ಅನುಗ್ರಹಿಸಲು ಅಧ್ಯಾತ್ಮ ಎಂಬ ದೊಡ್ಡ ರಹಸ್ಯವನ್ನು ನೀನು ಹೇಳಿದೆ. ಆ ಮಾತಿನಿಂದ ನನ್ನ ಈ ಮೋಹ (ತಪ್ಪು ಚಿಂತನೆ) ಹೋಯಿತು.
2 ಭವಾಪ್ಯಯೌ ಹಿ ಭೂತಾನಾಂ ಶ್ರುತೌ ವಿಸ್ತರಶೋ ಮಯಾ । ತ್ವತ್ತಃ ಕಮಲ-ಪತ್ರಾಕ್ಷ ಮಾಹಾತ್ಮ್ಯಮಪಿ ಚಾವ್ಯಯಮ್ ॥
ಓ ಕಮಲದ ಎಸಳಿನಂತೆ ನೀಳವಾದ ಕಣ್ಣಿನವನೆ, ಜೀವಿಗಳ ಹುಟ್ಟು-ಸಾವುಗಳನ್ನು ವಿಸ್ತಾರವಾಗಿ ನಿನ್ನಿಂದ ನಾನು ಕೇಳಿದೆನು. ನಿನ್ನ ನಾಶವಿರದ ಮಹಿಮೆಯನ್ನೂ ಕೇಳಿದೆನು.
3 ಏವಮೇತದ್ ಯಥಾಽಽತ್ಥ ತ್ವಂ ಆತ್ಮಾನಂ ಪರಮೇಶ್ವರ । ದ್ರಷ್ಟುಮಿಚ್ಛಾಮಿ ತೇ ರೂಪಂ ಐಶ್ವರಂ ಪುರುಷೋತ್ತಮ ॥
ಓ ಪರಮೇಶ್ವರನೆ, ನೀನು ನಿನ್ನ ಬಗ್ಗೆ ಏನು ಹೇಳಿದೆಯೋ ಅದು ಹಾಗೆಯೆ ಇದೆ. ಓ ಪುರುಷೋತ್ತಮನೆ, ಪ್ರಪಂಚವನ್ನು ಪಾಲಿಸುವ ನಿನ್ನ ರೂಪವನ್ನು ಕಾಣಲು ಬಯಸುತ್ತೇನೆ.
4 ಮನ್ಯಸೇ ಯದಿ ತಚ್ಛಕ್ಯಂ ಮಯಾ ದ್ರಷ್ಟುಮಿತಿ ಪ್ರಭೋ । ಯೋಗೇಶ್ವರ ತತೋ ಮೇ ತ್ವಂ ದರ್ಶಯಾಽತ್ಮಾನಮವ್ಯಯಮ್ ॥
ಓ ಸ್ವಾಮಿಯೆ, ಯೋಗಿಗಳ ಪಾಲಕನೆ, ಆ ರೂಪ ನನ್ನಿಂದ ನೋಡಲು ಸಾಧ್ಯವಿದೆ ಎಂದು ನೀನು ತಿಳಿಯುವುದಾದರೆ, ನನಗೆ ನಾಶವಿರದ ನಿನ್ನ ರೂಪವನ್ನು ತೋರಿಸು.
ಭಗವಾನ್ ಉವಾಚ
5 ಪಶ್ಯ ಮೇ ಪಾರ್ಥ ರೂಪಾಣಿ ಶತಶೋಽಥ ಸಹಸ್ರಶಃ । ನಾನಾ-ವಿಧಾನಿ ದಿವ್ಯಾನಿ ನಾನಾ-ವರ್ಣಾಕೃತೀನಿ ಚ ॥
ಕೃಷ್ಣನು ಹೇಳಿದನು - ಓ ಪಾರ್ಥನೆ, ಅನೇಕ ಬಣ್ಣಗಳ, ವಿವಿಧ ಆಕಾರಗಳ, ಬಗೆಬಗೆಯಲ್ಲಿ ಹೊಳೆವ ನನ್ನ ನೂರಾರು, ಸಾವಿರಾರು, ಇನ್ನೂ ಹೆಚ್ಚಿನ ರೂಪಗಳನ್ನು ನೋಡು.
6 ಪಶ್ಯಾಽದಿತ್ಯಾನ್ ವಸೂನ್ ರುದ್ರಾನ್ ಅಶ್ವಿನೌ ಮರುತಸ್ತಥಾ । ಬಹೂನ್ಯದೃಷ್ಟ-ಪೂರ್ವಾಣಿ ಪಶ್ಯಾಽಶ್ಚರ್ಯಾಣಿ ಭಾರತ ॥
ಓ ಭಾರತನೆ, ಆದಿತ್ಯರನ್ನೂ ವಸುಗಳನ್ನೂ ರುದ್ರರನ್ನೂ ಅಶ್ವಿನಿಗಳನ್ನೂ ಮತ್ತು ಮರುತ್ತುಗಳನ್ನೂ ನೋಡು. ಹಿಂದೆಂದೂ ಕಂಡಿರದ ಬಹಳ ಆಶ್ಚರ್ಯಗಳನ್ನು ನೋಡು.
7 ಇಹೈಕ-ಸ್ಥಂ ಜಗತ್ ಕೃತ್ಸ್ನಂ ಪಶ್ಯಾದ್ಯ ಸ-ಚರಾಚರಮ್ । ಮಮ ದೇಹೇ ಗುಡಾಕೇಶ ಯಚ್ಚಾನ್ಯದ್ ದ್ರಷ್ಟುಮಿಚ್ಛಸಿ ॥
ಓ ನಿದ್ದೆಯನ್ನು ಗೆದ್ದವನೆ, ಇಲ್ಲಿ ಒಂದೇ ಕಡೆ ಸೇರಿದ ಜಡ-ಜೀವಗಳಿಂದ ಕೂಡಿದ ಪೂರ್ತಿ ಪ್ರಪಂಚವನ್ನು ಈಗ ನೋಡು. ಬೇರೆ ಏನನ್ನಾದರೂ ನೋಡಲು ಬಯಸುವೆಯಾದರೆ ಅದನ್ನೂ ನನ್ನ ದೇಹದಲ್ಲಿ ನೋಡು.
8 ನತು ಮಾಂ ಶಕ್ಯಸೇ ದ್ರಷ್ಟುಂ ಅನೇನೈವ ಸ್ವ-ಚಕ್ಷುಷಾ । ದಿವ್ಯಂ ದದಾಮಿ ತೇ ಚಕ್ಷುಃ ಪಶ್ಯ ಮೇ ಯೋಗಮೈಶ್ವರಮ್ ॥
ನಿನ್ನ ಇದೇ ಕಣ್ಣಿನಿಂದ ನನ್ನನ್ನು ನೋಡಲು ಸಮರ್ಥನು ಆಗಲಾರೆ. ನಿನಗೆ ದಿವ್ಯವಾದ ಕಣ್ಣು ನೀಡುತ್ತೇನೆ. ನನ್ನ ವಿಶ್ವಪಾಲನೆಯ ರೂಪವನ್ನು ನೋಡು.
9 ಏವಮುಕ್ತ್ವಾ ತತೋ ರಾಜನ್ ಮಹಾ-ಯೋಗೇಶ್ವರೋ ಹರಿಃ । ದರ್ಶಯಾಮಾಸ ಪಾರ್ಥಾಯ ಪರಮಂ ರೂಪಮೈಶ್ವರಮ್ ॥
ಓ ಧೃತರಾಷ್ಟ್ರ ರಾಜನೆ, ಮಹಾಯೋಗಿಗಳಿಗೂ ಸ್ವಾಮಿಯಾದ ಕೃಷ್ಣನು ಹೀಗೆ ಹೇಳಿ, ಮತ್ತೆ ಅರ್ಜುನನಿಗೆ ವಿಶ್ವವನ್ನು ಪಾಲಿಸುವ ಉತ್ತಮ ರೂಪವನ್ನು ತೋರಿಸಿದನು.
10 ಅನೇಕ-ವಕ್ತ್ರ-ನಯನಂ ಅನೇಕಾದ್ಭುತ-ದರ್ಶನಮ್ । ಅನೇಕ-ದಿವ್ಯಾಭರಣಂ ದಿವ್ಯಾನೇಕೋದ್ಯತಾಯುಧಮ್ ॥
ಬಹಳ ಬಾಯಿ, ಕಣ್ಣುಗಳ ರೂಪ. ನೋಡಲು ಬಹಳ ಅಚ್ಚರಿಯ ರೂಪ. ಹೊಳೆವ ಬಹಳ ಆಭರಣಗಳುಳ್ಳ ರೂಪ. ಹೊಳೆವ ಬಹಳ ಆಯುಧಗಳ ಎತ್ತಿಹಿಡಿದ ರೂಪ.
11 ದಿವ್ಯ-ಮಾಲ್ಯಾಂಬರ-ಧರಂ ದಿವ್ಯ-ಗಂಧಾನು-ಲೇಪನಮ್ । ಸರ್ವಾಶ್ಚರ್ಯ-ಮಯಂ ದೇವಂ ಅನಂತಂ ವಿಶ್ವತೋ-ಮುಖಮ್ ॥
ಹೊಳೆವ ಮಾಲೆಗಳ, ಬಟ್ಟೆಗಳ ಧರಿಸಿರುವ ರೂಪ. ಗಂಧ ಮೆತ್ತಿಕೊಂಡು ಹೊಳೆವ ರೂಪ. ಎಲ್ಲ ಆಶ್ಚರ್ಯಗಳ ರಾಶಿ. ಎಲ್ಲ ಲೀಲೆಗಳ ರೂಪ. ಎಲ್ಲೆಡೆಯೂ ತುಂಬಿರುವ ಅನಂತ ರೂಪ.
12 ದಿವಿ ಸೂರ್ಯ-ಸಹಸ್ರಸ್ಯ ಭವೇದ್ ಯುಗಪದುತ್ಥಿತಾ । ಯದಿ ಭಾಃ ಸದೃಶೀ ಸಾ ಸ್ಯಾತ್ ಭಾಸಸ್ತಸ್ಯ ಮಹಾತ್ಮನಃ ॥
ಆಕಾಶದಲ್ಲಿ ಸಾವಿರಾರು ಸೂರ್ಯರು ಒಮ್ಮೆಲೇ ಮೂಡಿಬಂದರೆ, ಅಂಥ ಬೆಳಕು ಆ ದೊಡ್ಡ ರೂಪ ಹೊತ್ತವನ ಬೆಳಕಿಗೆ ಸಮ ಆದೀತೋ ಏನೋ?
13 ತತ್ರೈಕ-ಸ್ಥಂ ಜಗತ್ ಕೃತ್ಸ್ನಂ ಪ್ರವಿಭಕ್ತಮನೇಕ-ಧಾ । ಅಪಶ್ಯದ್ ದೇವ-ದೇವಸ್ಯ ಶರೀರೇ ಪಾಂಡವಸ್ತದಾ ॥
ದೇವೋತ್ತಮನಾದ ಕೃಷ್ಣನ ಆ ದೇಹದಲ್ಲಿ ಇಡಿಯ ಪ್ರಪಂಚವು ಬಹಳ ರೀತಿಯಲ್ಲಿ ವಿಭಾಗಗೊಂಡು ಒಂದೇ ಕಡೆ ಇರುವುದನ್ನು ಆಗಲೆ ಅರ್ಜುನನು ಕಂಡನು.
14 ತತಃ ಸ ವಿಸ್ಮಯಾವಿಷ್ಟೋ ಹೃಷ್ಟ-ರೋಮಾ ಧನಂ-ಜಯಃ । ಪ್ರಣಮ್ಯ ಶಿರಸಾ ದೇವಂ ಕೃತಾಂಜಲಿರಭಾಷತ ॥
ಅರ್ಜುನನು ನಿಬ್ಬೆರಗಾಗಿ ರೋಮಾಂಚನಗೊಂಡು ತಲೆಯನ್ನು ನೆಲಕ್ಕೆ ತಾಗಿಸಿ ಉದ್ದಂಡ ನಮಿಸಿದನು. ಮತ್ತೆ ಆತನು ಕೃಷ್ಣನಿಗೆ ಕೈ ಮುಗಿದು ಹೇಳಿಕೊಂಡನು.
15 ಪಶ್ಯಾಮಿ ದೇವಾಂಸ್ತವ ದೇವ ದೇಹೇ ಸರ್ವಾಂಸ್ತಥಾ ಭೂತ-ವಿಶೇಷ-ಸಂಘಾನ್ । ಬ್ರಹ್ಮಾಣಮೀಶಂ ಕಮಲಾಸನ-ಸ್ಥಂ ಋಷೀಂಶ್ಚ ಸರ್ವಾನುರಗಾಂಶ್ಚ ದಿವ್ಯಾನ್ ॥
ಓ ದೇವರೆ, ನಿನ್ನ ಶರೀರದಲ್ಲಿ ಎಲ್ಲ ದೇವತೆಗಳನ್ನು ನೋಡುತ್ತಿದ್ದೇನೆ. ಹಾಗೆಯೇ ನಿನ್ನ ಶರೀರದಲ್ಲಿ ಎಲ್ಲ ಬಗೆಯ ಜೀವಿಗಳ ರಾಶಿಗಳನ್ನೂ ನೋಡುತ್ತಿದ್ದೇನೆ. ಬ್ರಹ್ಮನನ್ನು ನೋಡುತ್ತಿದ್ದೇನೆ. ಪದ್ಮದ ಮೇಲಿರುವ ಬ್ರಹ್ಮನ ತೊಡೆಯಲ್ಲಿ ಶಿವನನ್ನು ನೋಡುತ್ತಿದ್ದೇನೆ. ಎಲ್ಲ ಋಷಿಗಳನ್ನೂ ಮತ್ತು ದಿವ್ಯನಾಗಗಳನ್ನೂ ನೋಡುತ್ತಿದ್ದೇನೆ.
16 ಅನೇಕ-ಬಾಹೂದರ-ವಕ್ತ್ರ-ನೇತ್ರಂ ಪಶ್ಯಾಮಿ ತ್ವಾಂ ಸರ್ವತೋಽನಂತ-ರೂಪಮ್ । ನಾಂತಂ ನ ಮಧ್ಯಂ ನ ಪುನಸ್ತವಾಽದಿಂ ಪಶ್ಯಾಮಿ ವಿಶ್ವೇಶ್ವರ ವಿಶ್ವ-ರೂಪ ॥
ಅನಂತರೂಪನನ್ನಾಗಿ ನಿನ್ನನ್ನು ಕಾಣುತ್ತಿದ್ದೇನೆ. ಎಲ್ಲೆಡೆಯೂ ಬಹಳ ತೋಳುಗಳು, ಹೊಟ್ಟೆಗಳು, ಬಾಯಿಗಳು, ಕಣ್ಣುಗಳು ಕಾಣುತ್ತಿವೆ. ಓ ವಿಶ್ವರೂಪನೆ, ಎಲ್ಲರ ಸ್ವಾಮಿಯೇ, ನಿನ್ನ ರೂಪದ ತುದಿ ಕಾಣುತ್ತಿಲ್ಲ. ಮಧ್ಯವೂ ಕಾಣದಾಗಿದೆ. ಬುಡವೂ ಕಂಡುಬರುತ್ತಿಲ್ಲ.
17 ಕಿರೀಟಿನಂ ಗದಿನಂ ಚಕ್ರಿಣಂ ಚ ತೇಜೋ-ರಾಶಿಂ ಸರ್ವತೋ ದೀಪ್ತಿ-ಮಂತಮ್ । ಪಶ್ಯಾಮಿ ತ್ವಾ ದುರ್ನಿರೀಕ್ಷ್ಯಂ ಸಮಂತಾತ್ ದೀಪ್ತಾನಲಾರ್ಕ-ದ್ಯುತಿಮಪ್ರಮೇಯಮ್ ॥
ಸುತ್ತಲೂ ಬೆಳಕಿನ ರಾಶಿಯನ್ನೆ ನೋಡುತ್ತಿರುವೆನು. ಹೊಳೆವ ಕಿರೀಟ ತೊಟ್ಟ, ಗದೆ ಹಿಡಿದ, ಚಕ್ರವೆತ್ತಿರುವ ನಿನ್ನನ್ನು ಕಾಣುತ್ತಿದ್ದೇನೆ. ನಿನ್ನ ಆ ರೂಪವನ್ನು ಸರಿಯಾಗಿ ಕಾಣಲಾಗುತ್ತಿಲ್ಲ. ಹೀಗೆಯೇ ಇದೆ ಎಂದು ಹೇಳಲಾಗುತ್ತಿಲ್ಲ. ಸುತ್ತಲೂ ಉರಿವ ಬೆಂಕಿಯಂತೆ ಮತ್ತು ಸೂರ್ಯನಂತೆ ಪ್ರಕಾಶವನ್ನೇ ನೋಡುತ್ತಿದ್ದೇನೆ.
18 ತ್ವಮಕ್ಷರಂ ಪರಮಂ ವೇದಿತವ್ಯಂ ತ್ವಮಸ್ಯ ವಿಶ್ವಸ್ಯ ಪರಂ ನಿಧಾನಮ್ । ತ್ವಮವ್ಯಯಃ ಶಾಶ್ವತ-ಧರ್ಮ-ಗೋಪ್ತಾ ಸನಾತನಸ್ತ್ವಂ ಪುರುಷೋ ಮತೋ ಮೇ ॥
ನೀನು ಮುಖ್ಯವಾಗಿ ತಿಳಿಯಬೇಕಾದ ಓಂಕಾರನು. ನೀನು ಈ ಪ್ರಪಂಚಕ್ಕೆ ದೊಡ್ಡ ಆಶ್ರಯ. ನೀನು ನಾಶವಿಲ್ಲದವನು, ಸನಾತನ ಧರ್ಮದ ರಕ್ಷಕನು. ನೀನು ಮೊದಲಿಂದಲೂ ಇದ್ದ ಪುರುಷನು ಎಂದು ನನಗೆ ಗೊತ್ತು.
19 ಅನಾದಿ-ಮಧ್ಯಾಂತಮನಂತ-ವೀರ್ಯಂ ಅನಂತ-ಬಾಹುಂ ಶಶಿ-ಸೂರ್ಯ-ನೇತ್ರಮ್ । ಪಶ್ಯಾಮಿ ತ್ವಾ ದೀಪ್ತ-ಹುತಾಶ-ವಕ್ತ್ರಂ ಸ್ವ-ತೇಜಸಾ ವಿಶ್ವಮಿದಂ ತಪಂತಮ್ ॥
ತುದಿ, ನಡು, ಬುಡವಿಲ್ಲದ ನಿನ್ನ ರೂಪವನ್ನು ನೋಡುತ್ತಿರುವೆನು. ನಾಶವಾಗದ ಬಲವುಳ್ಳ, ಅನಂತ ಕೈಗಳುಳ್ಳ ರೂಪವನ್ನು ಕಾಣುತ್ತಿರುವೆನು. ಚಂದ್ರ-ಸೂರ್ಯರ ಸೃಷ್ಟಿಸಿದ ಕಣ್ಣುಗಳ ರೂಪವನ್ನು, ಉರಿಯುವ ಬೆಂಕಿಯನ್ನು ಹೊರಚೆಲ್ಲುವ ಬಾಯಿಯ ರೂಪವನ್ನು ನೋಡಿದೆನು. ತನ್ನ ತೇಜಸ್ಸಿನಿಂದ ಈ ಜಗತ್ತನ್ನೆ ಸುಡುತ್ತಿರುವ ನಿನ್ನ ರೂಪವನ್ನು ಕಾಣುತ್ತಿದ್ದೇನೆ.
20 ದ್ಯಾವಾ-ಪೃಥಿವ್ಯೋರಿದಮಂತರಂ ಹಿ ವ್ಯಾಪ್ತಂ ತ್ವಯೈಕೇನ ದಿಶಶ್ಚ ಸರ್ವಾಃ । ದೃಷ್ಟ್ವಾಽದ್ಭುತಂ ರೂಪಮುಗ್ರಂ ತವೇದಂ ಲೋಕ-ತ್ರಯಂ ಪ್ರವ್ಯಥಿತಂ ಮಹಾತ್ಮನ್ ॥
ಭೂಲೋಕ ಮತ್ತು ಸ್ವರ್ಗದ ನಡುವಿನ ಅಂತರಿಕ್ಷವನ್ನೆಲ್ಲ ಹತ್ತು ದಿಕ್ಕುಗಳಲ್ಲೂ ನಿನ್ನ ಒಂದೇ ರೂಪ ತುಂಬಿದೆ. ಓ ಬೃಹದ್ರೂಪನೆ, ನಿನ್ನ ಈ ಅದ್ಭುತವಾದ ಭಯಂಕರ ರೂಪವನ್ನು ಕಂಡು ಮೂರೂ ಲೋಕದ ಜನರು ಪೂರ್ತಿ ಹೆದರಿ ನಡುಗುತ್ತಿದ್ದಾರೆ.
21 ಅಮೀ ಹಿ ತ್ವಾಸುರ-ಸಂಘಾ ವಿಶಂತಿ ಕೇಚಿದ್ ಭೀತಾಃ ಪ್ರಾಂಜಲಯೋ ಗೃಣಂತಿ । ಸ್ವಸ್ತೀತ್ಯುಕ್ತ್ವಾ ಮಹರ್ಷಿ-ಸಿದ್ಧ-ಸಂಘಾಃ ಸ್ತುವಂತಿ ತ್ವಾ ಸ್ತುತಿಭಿಃ ಪುಷ್ಕಳಾಭಿಃ ॥
ಅಸುರರ ಈ ಗುಂಪುಗಳು ನಿನ್ನೊಳಗೆ ಹೋಗುತ್ತಿವೆ. ಕೆಲವರು ಹೆದರಿ ನಿನ್ನನ್ನು ಕೈಮುಗಿದು ಹೊಗಳುತ್ತಿದ್ದಾರೆ. ಸ್ವಸ್ತಿ (ಒಳ್ಳೆಯದು ಆಗಲಿ) ಎಂದು ಹೇಳುತ್ತಾ ಮಹರ್ಷಿಗಳ, ಸಿದ್ಧರ ಗುಂಪುಗಳು ನಿನ್ನನ್ನು ಸ್ತೋತ್ರಗಳಿಂದ ಸ್ತುತಿಸುತ್ತಿದ್ದಾರೆ.
22 ರುದ್ರಾದಿತ್ಯಾ ವಸವೋ ಯೇ ಚ ಸಾಧ್ಯಾಃ ವಿಶ್ವೇಽಶ್ವಿನೌ ಮರುತಶ್ಚೋಷ್ಮಪಾಶ್ಚ । ಗಂಧರ್ವ-ಯಕ್ಷಾಸುರ-ಸಿದ್ಧ-ಸಂಘಾಃ ವೀಕ್ಷಂತೇ ತ್ವಾ ವಿಸ್ಮಿತಾಶ್ಚೈವ ಸರ್ವೇ ॥
ರಾಶಿಗಟ್ಟಲೆ ರುದ್ರರು, ಆದಿತ್ಯರು, ವಸುಗಳು, ಸಾಧ್ಯರು, ವಿಶ್ವೇದೇವತೆಗಳು, ಅಶ್ವಿಗಳು, ಮರುತ್ತುಗಳು, ಪಿತೃಗಳು, ಗಂಧರ್ವರು, ಯಕ್ಷರು, ಅಸುರರು, ಸಿದ್ಧರು - ಎಲ್ಲರೂ ಬಾಯಿಮುಚ್ಚಿ ಕಣ್ಣರಳಿಸಿ ನಿನ್ನನ್ನು ನೋಡುತ್ತಿದ್ದಾರೆ.
23 ರೂಪಂ ಮಹತ್ತೇ ಬಹು-ವಕ್ತ್ರ-ನೇತ್ರಂ ಮಹಾ-ಬಾಹೋ ಬಹು-ಬಾಹೂರು-ಪಾದಮ್ । ಬಹೂದರಂ ಬಹು-ದಂಷ್ಟ್ರಾ-ಕರಾಳಂ ದೃಷ್ಟ್ವಾ ಲೋಕಾಃ ಪ್ರ-ವ್ಯಥಿತಾಸ್ತಥಾಽಹಮ್ ॥
ಓ ವಿಶಾಲವಾದ ದೇಹ ಹೊತ್ತವನೇ, ನಿನ್ನ ದೊಡ್ಡ ರೂಪವು ಬಹಳ ಬಾಯಿ, ಕಣ್ಣು, ಕೈ,. ತೊಡೆ, ಕಾಲು, ಹೊಟ್ಟೆ, ಕೋರೆಹಲ್ಲುಗಳನ್ನು ಹೊಂದಿದೆ. ಉಗ್ರರೂಪವನ್ನು ಕಂಡು ಜನರು ತುಂಬಾ ಹೆದರಿ ನಡುಗಿ ಹೋಗಿದ್ದಾರೆ. ನಾನೂ ಹಾಗೆಯೆ ಬೆದರಿ ನಡುಗುತ್ತಿದ್ದೇನೆ.
24 ನಭಃ-ಸ್ಪೃಶಂ ದೀಪ್ತಮನೇಕ-ವರ್ಣಂ ವ್ಯಾತ್ತಾನನಂ ದೀಪ್ತ-ವಿಶಾಲ-ನೇತ್ರಮ್ । ದೃಷ್ಟ್ವಾಹಿ ತ್ವಾ ಪ್ರ-ವ್ಯಥಿತಾಂತರಾತ್ಮಾ ಧೃತಿಂ ನ ವಿಂದಾಮಿ ಶಮಂ ಚ ವಿಷ್ಣೋ ॥
ಒಳಗೂ ಹೊರಗೂ ತುಂಬಿ ನಿಂತ ಓ ವಿಷ್ಣುವೆ, ಆಕಾಶವನ್ನು ಮುಟ್ಟಿದ, ಬಹಳ ಬಣ್ಣಗಳ ಬೆಳಕು ಹರಡಿದ, ಬಾಯಿ ತೆರೆದ, ಹೊಳೆವ ಕಣ್ಣುಗಳನ್ನು ಅಗಲಿಸಿದ ನಿನ್ನ ರೂಪವನ್ನು ಕಂಡು ಮನಸ್ಸು ಹೆದರಿದೆ, ಬಾಧೆ ಪಟ್ಟಿದೆ. ಧೈರ್ಯ ತಪ್ಪಿದೆ. ಶಾಂತಿ ಇಲ್ಲವಾಗಿದೆ.
25 ದಂಷ್ಟ್ರಾ-ಕರಾಳಾನಿ ಚ ತೇ ಮುಖಾನಿ ದೃಷ್ಟ್ವೈವ ಕಾಲಾನಲ-ಸನ್ನಿಭಾನಿ । ದಿಶೋ ನ ಜಾನೇ ನ ಲಭೇ ಚ ಶರ್ಮ ಪ್ರಸೀದ ದೇವೇಶ ಜಗನ್ನಿವಾಸ ॥
ಪ್ರಳಯಕಾಲದ ಬೆಂಕಿಯನ್ನು ಹರಿಸುತ್ತಿರುವ ಕಪ್ಪು ಕಪ್ಪಾದ ಕೋರೆಹಲ್ಲುಗಳ ನಿನ್ನ ಬಾಯಿಗಳನ್ನು ಕಂಡೇ ದಿಕ್ಕು ತೋಚದಂತಾಗಿದೆ. ಸುಖ ಆಗುತ್ತಿಲ್ಲ. ಓ ದೇವತೆಗಳ ಸ್ವಾಮಿಯೆ, ವಿಶ್ವದಲ್ಲಿ ತುಂಬಿರುವವನೆ, ಪ್ರಸನ್ನನಾಗು, ಸುಂದರವಾಗಿ ಕಾಣಿಸಿಕೋ.
26 ಅಮೀ ಚ ತ್ವಾ ಧೃತರಾಷ್ಟ್ರಸ್ಯ ಪುತ್ರಾಃ ಸರ್ವೇ ಸಹೈವಾವನಿ-ಪಾಲ-ಸಂಘೈಃ । ಭೀಷ್ಮೋ ದ್ರೋಣಃ ಸೂತ-ಪುತ್ರಸ್ತಥಾಽಸೌ ಸಹಾಸ್ಮದೀಯೈರಪಿ ಯೋಧ-ಮುಖ್ಯೈಃ ॥
27 ವಕ್ತ್ರಾಣಿ ತೇ ತ್ವರಮಾಣಾ ವಿಶಂತಿ ದಂಷ್ಟ್ರಾ-ಕರಾಳಾನಿ ಭಯಾನಕಾನಿ । ಕೇಚಿದ್ ವಿಲಗ್ನಾ ದಶನಾಂತರೇಷು ಸಂದೃಶ್ಯಂತೇ ಚೂರ್ಣಿತೈರುತ್ತಮಾಂಗೈಃ ॥
ರಾಜರೆಲ್ಲರ ರಾಶಿಗಳೊಡನೆ ಧೃತರಾಷ್ಟ್ರನ ಮಕ್ಕಳೆಲ್ಲರೂ ಮತ್ತು ನಮ್ಮ ಮುಖ್ಯ ಹೋರಾಟಗಾರರೊಡನೆ ಭೀಷ್ಮ, ದ್ರೋಣ, ಹಾಗೆ ಈ ಸೂತಪುತ್ರ ಕರ್ಣನೂ ಗಡಿಬಿಡಿಯಿಂದ ನಿನ್ನ ವಿಕಾರ ಕೋರೆಹಲ್ಲುಗಳುಳ್ಳ ಭಯಂಕರವಾದ ಬಾಯಿಗಳೊಳಗೆ ಬೀಳುತ್ತಿದ್ದಾರೆ. ಕೆಲವರು ಹಲ್ಲುಗಳ ನಡುವೆ ಸಿಕ್ಕಿಕೊಂಡಿದ್ದಾರೆ. ಕೆಲವರ ತಲೆಗಳು ಹುಡಿಹುಡಿಯಾಗಿರುವುದು ಸುತ್ತಲೂ ಕಾಣಿಸುತ್ತಿವೆ.
28 ಯಥಾ ನದೀನಾಂ ಬಹವೋಂಽಬು-ವೇಗಾಃ ಸಮುದ್ರಮೇವಾಭಿ-ಮುಖಾ ದ್ರವಂತಿ । ತಥಾ ತವಾಮೀ ನರ-ಲೋಕ-ವೀರಾಃ ವಿಶಂತಿ ವಕ್ತ್ರಾಣ್ಯಭಿ-ವಿಜ್ವಲಂತಿ ॥
ನದಿಗಳ ಹಲವು ನೀರ ಪ್ರವಾಹಗಳು ಸಮುದ್ರಕ್ಕೆ ಎದುರಾಗಿಯೇ ಹರಿಯುತ್ತವೆ. ಹೀಗೆ ಈ ಮನುಷ್ಯಲೋಕದ ರಾಜರು, ಸುತ್ತಲೂ ಉರಿಯುತ್ತಿರುವ ನಿನ್ನ ಬಾಯಿಗಳ ಒಳಗೆ ಸೇರುತ್ತಿದ್ದಾರೆ.
29 ಯಥಾ ಪ್ರದೀಪ್ತಂ ಜ್ವಲನಂ ಪತಂಗಾಃ ವಿಶಂತಿ ನಾಶಾಯ ಸಮೃದ್ಧ-ವೇಗಾಃ । ತಥೈವ ನಾಶಾಯ ವಿಶಂತಿ ಲೋಕಾಃ ತವಾಪಿ ವಕ್ತ್ರಾಣಿ ಸಮೃದ್ಧ-ವೇಗಾಃ ॥
ಉರಿಯುವ ಬೆಂಕಿಗೆ, ಸಾಯಲೆಂದೆ ಹಾತೆಗಳು ಒಮ್ಮೆಲೇ ಹಾರಿಬಂದು ಬೀಳುತ್ತವೆ. ಹಾಗೆ ಲೋಕದ ಜನರು ಸಾಯಲೆಂದೆ ಜೋರಾಗಿ ಓಡುತ್ತ ಬಂದು ನಿನ್ನ ಬಾಯಿಗಳಲ್ಲಿ ಬೀಳುತ್ತಿದ್ದಾರೆ.
30 ಲೇಲಿಹ್ಯಸೇ ಗ್ರಸ-ಮಾನಃ ಸಮಂತಾತ್ ಲೋಕಾನ್ ಸಮಗ್ರಾನ್ ವದನೈರ್ಜ್ವಲದ್ಭಿಃ । ತೇಜೋಭಿರಾಪೂರ್ಯ ಜಗತ್ ಸಮಗ್ರಂ ಭಾಸಸ್ತವೋಗ್ರಾಃ ಪ್ರತಪಂತಿ ವಿಷ್ಣೋ ॥
ಎಲ್ಲೆಡೆ ತುಂಬಿದ ಓ ವಿಶ್ವರೂಪನೆ, ಬೆಂಕಿ ಹಾರುತ್ತಿರುವ ಬಾಯಿಗಳಿಂದ ಎಲ್ಲ ಜನರನ್ನೂ ನುಂಗುತ್ತ ಸುತ್ತಲೂ ನೆಕ್ಕುತ್ತಿರುವೆ. ನಿನ್ನ ತೀಕ್ಷ್ಣ ಕಿರಣಗಳು ಪ್ರಪಂಚವನ್ನು ಪೂರ್ತಿ ಆವರಿಸಿ ತುಂಬ ಬಿಸಿಯಿಂದ ಸುಡುತ್ತಿವೆ.
31 ಆಖ್ಯಾಹಿ ಮೇ ಕೋ ಭವಾನುಗ್ರ-ರೂಪೋ ನಮೋಽಸ್ತು ತೇ ದೇವ-ವರ ಪ್ರಸೀದ । ವಿಜ್ಞಾತುಮಿಚ್ಛಾಮಿ ಭವಂತಮಾದ್ಯಂ ನ ಹಿ ಪ್ರಜಾನಾಮಿ ತವ ಪ್ರವೃತ್ತಿಮ್ ॥
ಉಗ್ರರೂಪನು ನೀನು ಏನು ವೈಭವದವನು? ನನಗೆ ಹೇಳು. ಓ ದೇವಶ್ರೇಷ್ಠನೆ, ನಿನಗೆ ನಮಿಸಿದ್ದೇನೆ. ಪ್ರಸನ್ನನಾಗು. ಎಲ್ಲಕ್ಕೂ ಮೊದಲಿರುವ ನಿನ್ನನ್ನು ಚೆನ್ನಾಗಿ ತಿಳಿಯಲು ಬಯಸುತ್ತೇನೆ. ನಿನ್ನ ಲೀಲೆ ಸರಿಯಾಗಿ ತಿಳಿದಿಲ್ಲ.
ಭಗವಾನ್ ಉವಾಚ
32 ಕಾಲೋಽಸ್ಮಿ ಲೋಕ-ಕ್ಷಯ-ಕೃತ್ ಪ್ರವೃದ್ಧೋ ಲೋಕಾನ್ ಸಮಾಹರ್ತುಮಿಹ ಪ್ರವೃತ್ತಃ । ಋತೇಽಪಿ ತ್ವಾ ನ ಭವಿಷ್ಯಂತಿ ಸರ್ವೇ ಯೇಽವಸ್ಥಿತಾಃ ಪ್ರತ್ಯನೀಕೇಷು ಯೋಧಾಃ ॥
ಕೃಷ್ಣನು ಹೇಳಿದನು - ಎಲ್ಲೆಡೆ ತುಂಬಿದ ವಿಶ್ವರೂಪನು ನಾನು, ಲೋಕಗಳನ್ನು ನಾಶ ಮಾಡುವ ಕಾಲನು ಆಗಿದ್ದೇನೆ. ಎಲ್ಲರನ್ನೂ ಸಂಹರಿಸಲು ಇಲ್ಲಿ ತೊಡಗಿದ್ದೇನೆ. ನೀನು ಇರದಿದ್ದರೂ, ಎಲ್ಲ ಸೇನೆಗಳಲ್ಲಿ ಸೇರಿದ ಎಲ್ಲ ಹೋರಾಟಗಾರರೂ ನಾಶವಾಗುತ್ತಾರೆ.
33 ತಸ್ಮಾತ್ ತ್ವಮುತ್ತಿಷ್ಠ ಯಶೋ ಲಭಸ್ವ ಜಿತ್ವಾ ಶತ್ರೂನ್ ಭುಂಕ್ಷ್ವ ರಾಜ್ಯಂ ಸಮೃದ್ಧಮ್ । ಮಯೈವೈತೇ ನಿಹತಾಃ ಪೂರ್ವಮೇವ ನಿಮಿತ್ತ-ಮಾತ್ರಂ ಭವ ಸವ್ಯ-ಸಾಚಿನ್ ॥
ಆದ್ದರಿಂದ ನೀನು ಎದ್ದು ನಿಲ್ಲು, ವೈರಿಗಳನ್ನು ಗೆದ್ದು ಕೀರ್ತಿಯನ್ನು ಹೊಂದು. ಇಡಿಯ ರಾಜ್ಯವನ್ನು ಪಾಲಿಸು. ಇವರೆಲ್ಲ ನನ್ನಿಂದಲೆ ಮೊದಲೇ ಸತ್ತಾಗಿದೆ. ಓ ಸವ್ಯಸಾಚಿಯೆ, ನೀನು ಕೇವಲ ಕಾರಣ ಆಗು.
34 ದ್ರೋಣಂ ಚ ಭೀಷ್ಮಂ ಚ ಜಯದ್ರಥಂ ಚ ಕರ್ಣಂ ತಥಾಽನ್ಯಾನಪಿ ಯೋಧ-ವೀರಾನ್ । ಮಯಾ ಹತಾಂಸ್ತ್ವಂ ಜಹಿ ಮಾ ವ್ಯಥಿಷ್ಠಾಃ ಯುದ್ಧ್ಯಸ್ವ ಜೇತಾಸಿ ರಣೇ ಸಪತ್ನಾನ್ ॥
ನನ್ನಿಂದ ನಾಶಗೊಂಡ ದ್ರೋಣ, ಭೀಷ್ಮ, ಜಯದ್ರಥ, ಕರ್ಣ ಮತ್ತು ಇತರ ವೀರ ಹೋರಾಟಗಾರರನ್ನೂ ನೀನು ಕೊಲ್ಲು. ದುಃಖಿಸದಿರು, ಯುದ್ಧ ಮಾಡು. ಯುದ್ಧದಲ್ಲಿ ಶತ್ರುಗಳನ್ನು ಗೆಲ್ಲುವೆ.
35 ಏತಚ್ಛ್ರುತ್ವಾ ವಚನಂ ಕೇಶವಸ್ಯ ಕೃತಾಂಜಲಿರ್ವೇಪಮಾನಃ ಕಿರೀಟೀ । ನಮಸ್ಕೃತ್ವಾ ಭೂಯ ಏವಾಽಹ ಕೃಷ್ಣಂ ಸಗದ್ಗದಂ ಭೀತ-ಭೀತಃ ಪ್ರಣಮ್ಯ ॥
ಸುತ್ತಲೂ ಕೆದರಿದ ಕೇಶರಾಶಿಯ ಕೃಷ್ಣನ ಈ ಮಾತನ್ನು ಕೇಳಿ ಅರ್ಜುನನು ನಡುಗುತ್ತಾ ಕೈಮುಗಿದು ನಮಸ್ಕರಿಸಿ, ತುಂಬ ಹೆದರಿ ಮತ್ತೆಮತ್ತೆ ತಲೆಬಾಗಿ ನಮಿಸುತ್ತ ಕೃಷ್ಣನ ಬಳಿ ತಡವರಿಸುತ್ತ ಇನ್ನೂ ಹೇಳಿದನು.
36 ಸ್ಥಾನೇ ಹೃಷೀಕೇಶ ತವ ಪ್ರಕೀರ್ತ್ಯಾ ಜಗತ್ ಪ್ರಹೃಷ್ಯತ್ಯನು-ರಜ್ಯತೇ ಚ । ರಕ್ಷಾಂಸಿ ಭೀತಾನಿ ದಿಶೋ ದ್ರವಂತಿ ಸರ್ವೇ ನಮಸ್ಯಂತಿ ಚ ಸಿದ್ಧ-ಸಂಘಾಃ ॥
ಓ ಹೃಷೀಕೇಶನೆ, ಎಲ್ಲವೂ ಸತ್ಯ. ಜಗತ್ತು ನಿನ್ನ ಮಹಿಮೆಯಿಂದ ಸಂತಸಪಟ್ಟಿದೆ ಮತ್ತು ನಿನ್ನಲ್ಲಿ ಯೋಗ್ಯವಾದ ಭಕ್ತಿ ಮಾಡಿದೆ. ರಕ್ಕಸರು ಹೆದರಿ ಎತ್ತೆತ್ತಲೋ ಓಡುತ್ತಿದ್ದಾರೆ. ಸಿದ್ಧಿ ಪಡೆದವರೆಲ್ಲರೂ ಒಟ್ಟಾಗಿ ನಮಿಸುತ್ತಿದ್ದಾರೆ.
37 ಕಸ್ಮಾಚ್ಚ ತೇ ನ ನಮೇರನ್ ಮಹಾತ್ಮನ್ ಗರೀಯಸೇ ಬ್ರಹ್ಮಣೋಽಪ್ಯಾದಿ-ಕರ್ತ್ರೇ । ಅನಂತ ದೇವೇಶ ಜಗನ್ನಿವಾಸ ತ್ವಮಕ್ಷರಂ ಸದಸತ್ ತತ್ಪರಂ ಯತ್ ॥
ಓ ಮಹಾತ್ಮನೆ, ಚತುರ್ಮುಖನಿಗಿಂತಲೂ ಹಿರಿಯನಾಗಿ ಮೊದಲ ಸೃಷ್ಟಿಕಾರನಾದ ನಿನಗೆ ಅವರೆಲ್ಲರೂ ಹೇಗೆ ನಮಿಸದೆ ಇರುವರು? ಓ ಅನಂತಗುಣನೆ, ದೇವತೆಗಳ ಸ್ವಾಮಿಯೇ, ವಿಶ್ವರೂಪನೇ, ನೀನು ನಾಶವಿಲ್ಲದವನು. ಈ ಕಾಣುವ ಮಣ್ಣು ನೀರು ಬೆಂಕಿ, ಮತ್ತು ಕಾಣದ ಗಾಳಿ ಆಕಾಶ ಪ್ರಪಂಚಕ್ಕಿಂತ ಬೇರೆ ರೀತಿಯವನು, ಮಿಗಿಲಾದವನು.
38 ತ್ವಮಾದಿ-ದೇವಃ ಪುರುಷಃ ಪುರಾಣಃ ತ್ವಮಸ್ಯ ವಿಶ್ವಸ್ಯ ಪರಂ ನಿಧಾನಮ್ । ವೇತ್ತಾಽಸಿ ವೇದ್ಯಂ ಚ ಪರಂ ಚ ಧಾಮ ತ್ವಯಾ ತತಂ ವಿಶ್ವಮನಂತ-ರೂಪ ॥
ನೀನು ಎಲ್ಲ ದೇವತೆಗಳಿಗೂ ಮೂಲನು ಮತ್ತು ಎಲ್ಲರೊಳಗೂ ಇರುವವನು. ಮೊದಲಿಂದಲೂ ಇದ್ದವನು. ನೀನು ಈ ಜಗತ್ತಿಗೆ ಮುಖ್ಯ ಆಶ್ರಯನು. ನೀನು ಎಲ್ಲವನ್ನೂ ತಿಳಿದವನು ಮತ್ತು ಎಲ್ಲರಿಂದಲೂ ತಿಳಿಯಬೇಕಾದವನು. ನೀನು ಎಲ್ಲಕ್ಕಿಂತ ಬೇರೆಯಾದ ಸ್ವರೂಪದವನು. ಅನಂತರೂಪನೆ, ಪ್ರಪಂಚವು ನಿನ್ನಿಂದ ತುಂಬಿದೆ.
39 ವಾಯುರ್ಯಮೋಽಗ್ನಿರ್ವರುಣಃ ಶಶಾಂಕಃ ಪ್ರಜಾಪತಿಸ್ತ್ವಂ ಪ್ರಪಿತಾಮಹಶ್ಚ । ನಮೋ ನಮಸ್ತೇಽಸ್ತು ಸಹಸ್ರ-ಕೃತ್ವಃ ಪುನಶ್ಚ ಭೂಯೋಽಪಿ ನಮೋ-ನಮಸ್ತೇ ॥
ವಾಯು (ಬಲಜ್ಞಾನ ರೂಪ), ಯಮ (ನಿಯಾಮಕ), ಅಗ್ನಿ (ಚಾಲಕ), ವರುಣ (ಆವರಕ), ಶಶಾಂಕ (ಪೂರ್ಣಾನಂದ), ಪ್ರಜಾಪತಿ (ಪ್ರಜಾಪಾಲಕ) ಎಲ್ಲ ನೀನೆ. ಮತ್ತು ನೀನು ಎಲ್ಲರ ಮುತ್ತಜ್ಜ. ಸಾವಿರ ಬಾರಿ ನಿನಗೆ ನಮಿಸುವೆನು. ಮತ್ತೊಮ್ಮೆ ನಮಿಸುವೆ. ಇನ್ನೂ ನಮಿಸುತ್ತಲೇ ಇರುವೆ. ನಿನಗೆ ನಮೋನಮಃ.
40 ನಮಃ ಪುರಸ್ತಾದಥ ಪೃಷ್ಠತಸ್ತೇ ನಮೋಽಸ್ತು ತೇ ಸರ್ವತ ಏವ ಸರ್ವ । ಅನಂತ-ವೀರ್ಯಾಮಿತ-ವಿಕ್ರಮಸ್ತ್ವಂ ಸರ್ವಂ ಸಮಾಪ್ನೋಷಿ ತತೋಽಸಿ ಸರ್ವಃ ॥
ನಿನ್ನ ಎದುರಲ್ಲಿ ನಮಿಸುವೆ. ಹಿಂದೆಯೂ ನಿನಗೆ ನಮಿಸುವೆ. ಓ ಎಲ್ಲೆಡೆ ತುಂಬಿದವನೇ, ನಿನಗೆ ಎಲ್ಲ ಕಡೆಯಿಂದಲೂ ನಮಸ್ಕರಿಸುವೆನು. ಓ ನಾಶವಾಗದ ಸಾಮರ್ಥ್ಯವುಳ್ಳವನೆ, ನೀನು ಅಳತೆಗೆ ಸಿಗದ ಪರಾಕ್ರಮಶಾಲಿಯು. ನೀನು ಎಲ್ಲವನ್ನೂ ಪೂರ್ತಿ ವ್ಯಾಪಿಸಿ ಇರುವುದರಿಂದಲೇ ನೀನೇ “ಎಲ್ಲ” (ಸರ್ವ).
41 ಸಖೇತಿ ಮತ್ವಾ ಪ್ರಸಭಂ ಯದುಕ್ತಂ ಹೇ ಕೃಷ್ಣ ಹೇ ಯಾದವ ಹೇ ಸಖೇತಿ । ಅಜಾನತಾ ಮಹಿಮಾನಂ ತವೇದಂ ಮಯಾ ಪ್ರಮಾದಾತ್ ಪ್ರಣಯೇನ ವಾಽಪಿ ॥
ನಿನ್ನ ಈ ಮಹಿಮೆಯನ್ನು ತಿಳಿಯದೆ ನಾನು ಗೆಳೆಯನೆಂದೆ ಯೋಚಿಸಿ, ಏ ಕೃಷ್ಣ, ಏ ಯಾದವ, ಏ ಸಖನೇ ಎಂದು ಗೆಳೆತನದಲ್ಲೊ, ಗಮನಕೊಡದೆಯೊ ಎಗ್ಗಿಲ್ಲದೆ ಕರೆದು ಕೂಗಿದ್ದುಂಟು.
42 ಯಚ್ಚಾಪ-ಹಾಸಾರ್ಥಮಸತ್ಕೃತೋಽಸಿ ವಿಹಾರ-ಶಯ್ಯಾಸನ-ಭೋಜನೇಷು । ಏಕೋಽಥವಾಽಪ್ಯಚ್ಯುತ ತತ್ ಸಮಕ್ಷಂ ತತ್ ಕ್ಷಾಮಯೇ ತ್ವಾಮಹಮಪ್ರ-ಮೇಯಮ್ ॥
ಆಟಗಳಲ್ಲಿ, ಊಟಗಳಲ್ಲಿ, ಮಲಗುವ ಮಂಚಗಳಲ್ಲೂ ಒಬ್ಬನೆ ಇದ್ದಾಗಲೂ ಅಥವಾ ಎಲ್ಲರೆದುರೂ ತಮಾಷೆ ಮಾಡಲೆಂದೆ ನಾನು ತಿರಸ್ಕರಿಸಿದ್ದೇನೆ. ಓ ಅಚ್ಯುತನೆ, ಪೂರ್ತಿ ತಿಳಿಯಲಾಗದ ನಿನ್ನನ್ನು ನಾನು ಕ್ಷಮಿಸು ಎಂದು ಬೇಡಿಕೊಳ್ಳುವೆನು.
43 ಪಿತಾಽಸಿ ಲೋಕಸ್ಯ ಚರಾಚರಸ್ಯ ತ್ವಮಸ್ಯ ಪೂಜ್ಯಶ್ಚ ಗುರುರ್ಗರೀಯಾನ್ । ನ ತ್ವತ್ ಸಮೋಽಸ್ತ್ಯಭ್ಯಧಿಕಃ ಕುತೋಽನ್ಯೋ ಲೋಕ-ತ್ರಯೇಽಪ್ಯಪ್ರತಿಮ-ಪ್ರಭಾವ ॥
ನೀನು ಈ ಚರಾಚರ ಪ್ರಪಂಚದ ಪಾಲಕನು. ಈ ಲೋಕಕ್ಕೆ ಆರಾಧ್ಯನು ನೀನೆ. ನೀನು ಗುರುವಿಗೂ ಹಿರಿಯ ಗುರು. ಸರಿಸಾಟಿಯಿಲ್ಲದ ರೂಪ ಹೊತ್ತವನೆ, ಮೂರು ಲೋಕದಲ್ಲಿಯೂ ನಿನಗೆ ಸಮನಾದವನೇ ಇಲ್ಲ. ನಿನಗಿಂತ ಹೆಚ್ಚಿನವನು ಬೇರೆ ಎಲ್ಲಿ ಇದ್ದಾನೆ?
44 ತಸ್ಮಾತ್ ಪ್ರಣಮ್ಯ ಪ್ರಣಿಧಾಯ ಕಾಯಂ ಪ್ರಸಾದಯೇ ತ್ವಾಮಹಮೀಶಮೀಡ್ಯಮ್ । ಪಿತೇವ ಪುತ್ರಸ್ಯ ಸಖೇವ ಸಖ್ಯುಃ ಪ್ರಿಯಃ ಪ್ರಿಯಾಯಾರ್ಹಸಿ ದೇವ ಸೋಢುಮ್ ॥
ಆದ್ದರಿಂದ, ಎಲ್ಲರೂ ಸ್ತುತಿಸುವ, ಎಲ್ಲರ ಸ್ವಾಮಿಯಾದ ನಿನ್ನನ್ನು ನಾನು, ದೇಹವನ್ನು ನೆಲದಲ್ಲಿ ಉದ್ದ ಚಾಚಿ ಮನಸಾರೆ ನಮಿಸುತ್ತ ಪ್ರಸನ್ನನಾಗು ಎಂದು ಬೇಡುವೆನು. ಓ ದೇವನೆ, ತಂದೆ ಮಗನ ತಪ್ಪುಗಳನ್ನು, ಗೆಳೆಯ ಗೆಳೆಯನ ತಪ್ಪುಗಳನ್ನು ಸಹಿಸುವಂತೆ, ನನಗೆ ಪ್ರಿಯನಾದ ನೀನು, ನಿನಗೆ ಪ್ರಿಯನಾದ ನನ್ನ ತಪ್ಪುಗಳನ್ನು ಸಹಿಸು, ಕ್ಷಮಿಸು.
45 ಅದೃಷ್ಟ-ಪೂರ್ವಂ ಹೃಷಿತೋಽಸ್ಮಿ ದೃಷ್ಟ್ವಾ ಭಯೇನ ಚ ಪ್ರವ್ಯಥಿತಂ ಮನೋ ಮೇ । ತದೇವ ಮೇ ದರ್ಶಯ ದೇವ ರೂಪಂ ಪ್ರಸೀದ ದೇವೇಶ ಜಗನ್ನಿವಾಸ ॥
ಹಿಂದೆ ಕಂಡಿರದ ರೂಪವನ್ನು ಕಂಡು ಸಂತೋಷ ಆಗಿದೆ. ನನ್ನ ಮನಸ್ಸು ಹೆದರಿ ದುಃಖಗೊಂಡಿದೆ. ಓ ದೇವನೆ, ನನಗೆ ಆ ಹಿಂದಿನ ರೂಪವನ್ನೆ ತೋರಿಸು. ಓ ದೇವತೆಗಳ ಸ್ವಾಮಿಯೆ, ಜಗದ ಆಶ್ರಯನೆ ಪ್ರಸನ್ನನಾಗು.
46 ಕಿರೀಟಿನಂ ಗದಿನಂ ಚಕ್ರ-ಹಸ್ತಂ ಇಚ್ಛಾಮಿ ತ್ವಾಂ ದ್ರಷ್ಟುಮಹಂ ತಥೈವ । ತೇನೈವ ರೂಪೇಣ ಚತುರ್ಭುಜೇನ ಸಹಸ್ರ-ಬಾಹೋ ಭವ ವಿಶ್ವ-ಮೂರ್ತೇ ॥
ಕಿರೀಟ ತೊಟ್ಟ, ಗದೆ-ಚಕ್ರ ಕೈಯಲ್ಲಿ ಹಿಡಿದ, ಹಿಂದಿನ ಆ ರೂಪದಲ್ಲಿಯೇ ನಿನ್ನನ್ನು ನೋಡಲು ನಾನು ಬಯಸುತ್ತೇನೆ. ಸಾವಿರಾರು ತೋಳಿನ ವಿಶ್ವರೂಪನೆ, ನಾಲ್ಕು ಕೈಯ ಹಿಂದಿನ ರೂಪದಿಂದಲೆ ಕಾಣಿಸಿಕೊ.
ಭಗವಾನ್ ಉವಾಚ
47 ಮಯಾ ಪ್ರಸನ್ನೇನ ತವಾರ್ಜುನೇದಂ ರೂಪಂ ಪರಂ ದರ್ಶಿತಮಾತ್ಮ-ಯೋಗಾತ್ । ತೇಜೋ-ಮಯಂ ವಿಶ್ವಮನಂತಮಾದ್ಯಂ ಯನ್ಮೇ ತ್ವದನ್ಯೇನ ನ ದೃಷ್ಟ-ಪೂರ್ವಮ್ ॥
ಕೃಷ್ಣನು ಹೇಳಿದನು - ಓ ಅರ್ಜುನನೆ, ನಿನ್ನ ಅನುಗ್ರಹಕ್ಕಾಗಿಯೆ ನಾನು ನನ್ನ ಶಕ್ತಿಯಿಂದ ಈ ಪೂರ್ಣರೂಪವನ್ನು ತೋರಿಸಿದೆ. ಎಲ್ಲಕ್ಕೂ ಕಾರಣವಾದ ನಾಶವಿರದ ನನ್ನ ಈ ಬೆಳಕಿನ ರಾಶಿಯ ವಿಶ್ವರೂಪವನ್ನು ನಿನ್ನ ಹೊರತು ಬೇರೆ ಯಾರೂ ಈ ಹಿಂದೆ ನೋಡಿಲ್ಲ.
48 ನ ವೇದ-ಯಜ್ಞಾಧ್ಯಯನೈರ್ನ ದಾನೈಃ ನ ಚ ಕ್ರಿಯಾಭಿರ್ನ ತಪೋಭಿರುಗ್ರೈಃ । ಏವಂ-ರೂಪಃ ಶಕ್ಯ ಅಹಂ ನೃ-ಲೋಕೇ ದ್ರಷ್ಟುಂ ತ್ವದನ್ಯೇನ ಕುರು-ಪ್ರವೀರ ॥
ಓ ಕುರುವಂಶದ ವೀರನೆ, ನಾನು ಹೀಗೆ ವಿಶ್ವರೂಪನು ಮನುಷ್ಯರ ಲೋಕದಲ್ಲಿ ನಿನ್ನ ಹೊರತು ಬೇರೆ ಯಾರಿಂದಲೂ, ಯಜ್ಞಪ್ರಧಾನವಾಗಿ ವೇದಗಳ ಓದಿನಿಂದ, ದಾನಗಳಿಂದ, ವ್ರತ-ನಿಯಮಗಳಿಂದ ಅಥವಾ ಕಠೋರ ತಪಸ್ಸುಗಳಿಂದ ಕಾಣಲು ಸಿಗುವುದಿಲ್ಲ.
49 ಮಾ ತೇ ವ್ಯಥಾ ಮಾ ಚ ವಿಮೂಢ-ಭಾವೋ ದೃಷ್ಟ್ವಾರೂಪಂ ಘೋರಮೀದೃಙ್ಮಮೇದಮ್ ವ್ಯಪೇತ-ಭೀಃ ಪ್ರೀತ-ಮನಾಃ ಪುನಸ್ತ್ವಂ ತದೇವ ಮೇ ರೂಪಮಿದಂ ಪ್ರಪಶ್ಯ ॥
ನನ್ನ ಈ ಉಗ್ರರೂಪವನ್ನು ಕಂಡು ಹೆದರಿ ನಡುಗಬೇಡ, ಮೋಹಗೊಳ್ಳಬೇಡ. ಹೆದರಿಕೆ ಬಿಟ್ಟು ಭಕ್ತಿಭಾವದಿಂದ ನೀನು ಮತ್ತೆ ನನ್ನ ಹಿಂದಿನ ರೂಪವನ್ನೆ ಇದೋ ನೋಡು, ಚೆನ್ನಾಗಿ.
50 ಇತ್ಯರ್ಜುನಂ ವಾಸುದೇವಸ್ತಥೋಕ್ತ್ವಾ ಸ್ವಕಂ ರೂಪಂ ದರ್ಶಯಾಮಾಸ ಭೂಯಃ । ಆಶ್ವಾಸಯಾಮಾಸ ಚ ಭೀತಮೇನಂ ಭೂತ್ವಾ ಪುನಃ ಸೌಮ್ಯ-ವಪುರ್ಮಹಾತ್ಮಾ ॥
ಹೀಗೆ ಕೃಷ್ಣನು ಅರ್ಜುನನಿಗೆ ಹೇಳಿ, ಮತ್ತೆ ತನ್ನ ಕೃಷ್ಣರೂಪವನ್ನೆ ತೋರಿಸಿದನು. ವಿಶ್ವರೂಪನಾಗಿದ್ದ ಕೃಷ್ಣನು ಮತ್ತೆ ಶಾಂತರೂಪದವನಾಗಿ ಹೆದರಿದ ಅರ್ಜುನನನ್ನು ಸಮಾಧಾನಪಡಿಸಿದನು.
ಅರ್ಜುನ ಉವಾಚ
51 ದೃಷ್ಟ್ವೇದಂ ಮಾನುಷಂ ರೂಪಂ ತವ ಸೌಮ್ಯಂ ಜನಾರ್ದನ । ಇದಾನೀಮಸ್ಮಿ ಸಂ-ವೃತ್ತಃ ಸ-ಚೇತಾಃ ಪ್ರಕೃತಿಂ ಗತಃ ॥
ಅರ್ಜುನನು ಹೇಳಿದನು - ಓ ಜನಾರ್ದನನೆ, ಮನುಷ್ಯನ ಆಕಾರದ ನಿನ್ನ ಈ ಶಾಂತವಾದ ರೂಪವನ್ನು ಕಂಡು ಈಗ ಸಹಜಸ್ಥಿತಿಗೆ ಬಂದಿದ್ದೇನೆ. ಮನಸ್ಸು ಪೂರ್ಣ ತಿಳಿಯಾಗಿದೆ.
ಭಗವಾನ್ ಉವಾಚ
52 ಸು-ದುರ್ದರ್ಶಮಿದಂ ರೂಪಂ ದೃಷ್ಟ-ವಾನಸಿ ಯನ್ಮಮ । ದೇವಾ ಅಪ್ಯಸ್ಯ ರೂಪಸ್ಯ ನಿತ್ಯಂ ದರ್ಶನ-ಕಾಂಕ್ಷಿಣಃ ॥
ಕೃಷ್ಣನು ಹೇಳಿದನು - ಸುಲಭವಾಗಿ ಕಾಣಲಾಗದ ನನ್ನ ಈ ವಿಶ್ವರೂಪವನ್ನು ಕಂಡೆ. ದೇವತೆಗಳೂ ಈ ರೂಪವನ್ನು ಕಾಣಲು ಯಾವಾಗಲೂ ಬಯಸುತ್ತಾರೆ.
53 ನಾಹಂ ವೇದೈರ್ನ ತಪಸಾ ನ ದಾನೇನ ನ ಚೇಜ್ಯಯಾ । ಶಕ್ಯ ಏವಂ-ವಿಧೋ ದ್ರಷ್ಟುಂ ದೃಷ್ಟ-ವಾನಸಿ ಮಾಂ ಯಥಾ ॥
ನೀನು ಕಂಡಂತೆ, ಈ ಬಗೆಯ ನನ್ನನ್ನು ಯಜ್ಞ-ದಾನ-ತಪಸ್ಸುಗಳಿಂದ ಅಥವಾ ವೇದದ ಪಠನಮಾತ್ರದಿಂದಲೊ ಕಾಣಲು ಸಾಧ್ಯವಿಲ್ಲ.
54 ಭಕ್ತ್ಯಾತ್ವನನ್ಯಯಾ ಶಕ್ಯ ಅಹಮೇವಂ-ವಿಧೋಽರ್ಜುನ । ಜ್ಞಾತುಂ ದ್ರಷ್ಟುಂ ಚ ತತ್ತ್ವೇನ ಪ್ರವೇಷ್ಟುಂ ಚ ಪರಂ ತಪ ॥
ಓ ಅರ್ಜುನನೆ, ನನ್ನನ್ನು ಈ ರೀತಿಯಾಗಿ ಚೆನ್ನಾಗಿ ಕಾಣಲು, ಚೆನ್ನಾಗಿ ತಿಳಿಯಲು ಮತ್ತೆ ಚೆನ್ನಾಗಿ ಪೂರ್ತಿ ಸೇರಲು, ನನ್ನಲ್ಲೆ ಮಾಡಿದ ಭಕ್ತಿಯಿಂದ ಮಾತ್ರವೆ ಸಾಧ್ಯವಾಗಲಿದೆ. ಸರಿಯಾಗಿ ತಿಳಿ.
55 ಮತ್ಕರ್ಮ-ಕೃನ್ಮತ್ಪರಮೋ ಮದ್ಭಕ್ತಃ ಸಂಗ-ವರ್ಜಿತಃ । ನಿರ್ವೈರಃ ಸರ್ವ-ಭೂತೇಷು ಯಃ ಸ ಮಾಮೇತಿ ಪಾಂಡವ ॥
ಓ ಪಾಂಡವನೆ, ನನ್ನ ಧರ್ಮ ಮಾಡುವವನು, ನಾನೇ ಸರ್ವೋತ್ತಮನೆಂದು ತಿಳಿದವನು, ಬೇರೆ ಎಲ್ಲೂ ಆಸಕ್ತನಾಗದೆ ನನ್ನಲ್ಲೆ ಭಕ್ತಿ ಮಾಡಿದವನು, ಎಲ್ಲ ಜೀವರಲ್ಲೂ ದ್ವೇಷವಿಲ್ಲದವನು ಯಾರಾದರೂ ನನ್ನನ್ನು ಹೊಂದುತ್ತಾನೆ.

ಇತಿ ಏಕಾದಶೋಽಧ್ಯಾಯಃ